Advertisement

ಹಿಂದೂಗಳು ಟಾರ್ಗೆಟ್ ಆಗುತ್ತಿದ್ದಾರೆ, ಗಲಭೆಗೆ ಡೈರೆಕ್ಟರ್, ಪ್ರೊಡ್ಯೂಸರ್ ಜಮೀರ್: ಸಿ.ಟಿ ರವಿ

03:32 PM Aug 15, 2020 | keerthan |

ಚಿಕ್ಕಮಗಳೂರು: ಬೆಂಗಳೂರು ಗಲಭೆ ಪ್ರಕರಣಕ್ಕೆ ಶಾಸಕ ಜಮೀರ್ ಅಹಮದ್ ಅವರೇ ಡೈರಕ್ಟರ್, ಪ್ರೊಡ್ಯೂಸರ್ ಆಗಿದ್ದಾರೆ ಎಂದು ಅನಿಸುತ್ತದೆ. ಅಲ್ಲಿನ ನಟರು ಯಾರೆಂದು ಕೂಡಾ ಅವರಿಗೆ ಗೊತ್ತಿದೆ ಎಂದು ಸಚಿವ ಸಿ ಟಿ ರವಿ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜಮೀರ್ ಅಹಮದ್ ಅದೇ ರೀತಿ ಮಾಡುತ್ತಿದ್ದಾರೆ. ನಷ್ಟವನ್ನ ಜಮೀರ್ ರಿಂದಲೇ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದರು.

ಜಮೀರ್ ಸಹಾಯ ಮಾಡುವುದು ಮಾನವೀಯ ಸಂಬಂಧ ಇರಬಹುದು. ಆದರೆ ಯಾರಿಗೆ, ಯಾವ ಸಂದರ್ಭದಲ್ಲಿ ಮಾಡುತ್ತಾರೆ ಎನ್ನುವುದು ಮುಖ್ಯ. ಇದು ಯಾರು ಏನೇ ಮಾಡದರು ಜೊತೆಗಿರ್ತೀನಿ ಎಂಬ ಸಂದೇಶ ಕೊಡುತ್ತೆ, ಮಾನವೀಯ ಸಂದೇಶ ಕೊಡುವುದಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ಪೋಸ್ಟ್ ಗಳ ಪರಿಶೀಲನೆಗೆ ಫೇಸ್ ಬುಕ್, ವಾಟ್ಸಪ್ ಮುಖಂಡರ ಜೊತೆ ಚರ್ಚೆ: ಬಸವರಾಜ ಬೊಮ್ಮಾಯಿ

ಬಲಿಯಾದವರು ಅಮಾಯಕರು ಎನ್ನುತ್ತಿದ್ದಾರೆ, ಆದರೆ ಅಮಾಯಕರು ಮನೆಯಲ್ಲಿ ಮಲಗಿರುತ್ತಾರೆ. ಬಲಿಯಾದವರು ಅಮಾಯಕರಾದರೆ, ವಾಹನ ಸುಟ್ಟ ಕಿರಾತಕರು ಯಾರು? ಇವರು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿಲ್ಲ, ಪೊಲೀಸರು ಮತ್ತು ಹಿಂದೂಗಳಷ್ಟೆ ಟಾರ್ಗೆಟ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದರು.

Advertisement

ಬುದ್ಧಿ ಜೀವಿಗಳು ಈಗ ಲದ್ದಿ ತಿನ್ನುತ್ತಿದ್ದಾರೆ. ದಲಿತ ಶಾಸಕನ ಮನೆ ಮೇಲಿನ ದೌರ್ಜನ್ಯಕ್ಕೆ ಯಾಕೆ ಸುಮ್ಮನಿದ್ದಾರೆ. ಎಲ್ಲಿದೆ ಇವರ ಅಹಿಂದಾ ಪ್ರೇಮ ಎಂದು ಸಚಿವರು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next