Advertisement

HDK ಹೇಳಿದ್ದಕ್ಕೆಲ್ಲಾ ಉತ್ತರ ಕೊಡುತ್ತಾ ಹೋದರೆ ನಮಗೆ ಬೆಲೆ ಇರುವುದಿಲ್ಲ: ಬೈರತಿ ಸುರೇಶ್

03:48 PM Aug 06, 2023 | Team Udayavani |

ರಾಯಚೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದನ್ನೇ ಹೇಳಿಕೊಂಡು ಓಡಾಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡುತ್ತಾ ಹೋದರೆ ನಮಗೆ ಬೆಲೆ ಇರುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಲೇವಡಿ ಮಾಡಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಚ್.ಡಿಕೆಯವರ ಪೆನ್‌ ಡ್ರೈವ್ ಬಾಂಬ್  ಬಗ್ಗೆ ಲೇವಡಿ ಮಾಡಿ, ಕುಮಾರಸ್ವಾಮಿ ಪ್ರತಿದಿನ ಆರೋಪ ಮಾಡಿಕೊಂಡೆ ಓಡಾಡುತ್ತಾರೆ. ಬಿಡಿಎ ಮತ್ತು ನೈಸ್ ಹಗರಣದಲ್ಲಿ ಪ್ರಧಾನಿಗೆ ಎಚ್.ಡಿ.ಕೆ.ಪತ್ರ ಬರೆದಿದ್ದಾರಲ್ಲ ಅದರ ದಾಖಲೆ ಕೊಡಲಿ. ತನಿಖೆಯಾಗಲಿ ಏನಾಗುತ್ತದೆ ನೋಡೊಣ. ಅದಕ್ಕೆ ನಾವು ಯಾಕೆ ಉತ್ತರ ಕೊಡಬೇಕು. ಜನರೇ ಉತ್ತರ ಕೊಡ್ತಾರೆ ಎಂದರು.

ಇದನ್ನೂ ಓದಿ:ಹಳಿ ತಪ್ಪಿ ಉರುಳಿದ ರೈಲು; 15 ಮಂದಿ ಸಾವು; 50ಕ್ಕೂ ಹೆಚ್ಚು ಜನರಿಗೆ ಗಾಯ

ನಮ್ಮಲ್ಲಿ ಯಾವುದೇ ಶಾಸಕರ ಮದ್ಯೆ ಅಸಮಾಧಾನ ಇಲ್ಲ. ಹೊಸ ಸರ್ಕಾರ ಬಂದಾಗ ಹೊಸ ಶಾಸಕರು ಆಯ್ಕೆಯಾಗಿರುತ್ತಾರೆ. ಜನರ ಅಪೇಕ್ಷೆಗಳು ಇರುತ್ತವೆ. ಹೀಗಾಗಿ ಮುಖ್ಯಮಂತ್ರಿ ಶಾಸಕರ ಸಭೆ ನಡೆಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next