Advertisement

ಅಪ್ರಾಪ್ತೆ ಮೇಲಿನ ಹತ್ಯಾಚಾರ ಖಂಡನೀಯ

05:51 PM Dec 16, 2021 | Shwetha M |

ಇಂಡಿ: ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ತಾಂಡಾದ ಅಪ್ರಾಪ್ತೆ ಮೇಲೆ ನಡೆದಿರುವ ಹತ್ಯಾಚಾರ ಖಂಡಿಸಿ ಇಂಡಿ ಆಲ್‌ ಇಂಡಿಯಾ ಬಂಜಾರಾ ಸೇವಾ ಸಂಘದ ಕಾರ್ಯಕರ್ತರು ಹಾಗೂ ಬಂಜಾರಾ ಸಮುದಾಯದವರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್‌ ಸಿದ್ರಾಮ ಮುಜಗೊಂಡ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಸಂಘಟನೆ ತಾಲೂಕಾಧ್ಯಕ್ಷ ಸಂಜು ಚವ್ಹಾಣ, ಸಮಾಜದ ಮುಖಂಡ ವಿಜಯಕುಮಾರ ರಾಠೊಡ ಮಾತನಾಡಿ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದು ಒಂದು ವಾರ ಕಳೆಯುತ್ತ ಬಂದರೂ ಜಿಲ್ಲಾಡಳಿತ ಮೌನ ವಹಿಸಿದೆ. ಬಡ ಜನಾಂಗದ ಮೇಲೆ ಸರಕಾರಕ್ಕೆ ಕರುಣೆ ಇಲ್ಲವೇ? ಅತ್ಯಾಚಾರವೆಸಗಿದ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಬೇಕು. ಬಾಧಿತ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಶೈಲಶ್ರೀ ರಾಠೊಡ, ಸುನೀಲ ರಾಠೊಡ, ಬಾಬು ಪವಾರ, ರಾಜು ಪವಾರ, ಸಂಜು ಜಾಧವ, ಮೋಹನ ರಾಠೊಡ, ಪ್ರಕಾಶ ಪವಾರ, ಅಶೋಕ ರಾಠೊಡ, ವಿವೇಕ್‌ ರಾಠೊಡ, ಅಭಿಷೇಕ ಜಾಧವ, ವಿಲಾಸ ಚವ್ಹಾಣ, ರಾಹುಲ್‌ ರಾಠೊಡ, ಕಲ್ಲು ರಾಠೊಡ, ಮಾದೇವ ಪವಾರ, ಗಣೇಶ ರಾಠೊಡ, ಧರ್ಮಸಿಂಗ್‌ ರಾಠೊಡ, ಪಂಡಿತ ರಾಠೊಡ, ಅರವಿಂದ ಜಾಧವ, ಕಿಶನ್‌ ಪವಾರ, ರವಿಕಾಂತ ಚವ್ಹಾಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next