Advertisement

ತ್ರಾಲ್‌ : ಎನ್‌ಸಿ ನಾಯಕನ ನಿವಾಸದ ಮೇಲೆ ಉಗ್ರರಿಂದ ಗ್ರೆನೇಡ್‌ ಎಸೆತ

09:43 AM Apr 17, 2019 | Sathish malya |

ಶ್ರೀನಗರ : ದಕ್ಷಿಣ ಪುಲ್ವಾಮಾ ಜಿಲ್ಲೆಯ ತ್ರಾಲ್‌ ಪಟ್ಟಣದಲ್ಲಿನ ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಮೊಹಮ್ಮದ್‌ ಅಶ್ರಫ್ ಭಟ್‌ ಅವರ ನಿವಾಸದ ಮೇಲೆ ಉಗ್ರರು ಇಂದು ಮಂಗಳವಾರ ಗ್ರೆನೇಡ್‌ ಎಸೆದಿರುವ ಘಟನೆ ವರದಿಯಾಗಿದೆ.

Advertisement

ಆದರೆ ಗ್ರೆನೇಡ್‌ ಸ್ಫೋಟದಲ್ಲಿ ಯಾವುದೇ ಹಾನಿ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರು ಎಸೆದ ಗ್ರೆನೇಡ್‌ ಗುರಿ ತಲುಪದೆ ಭಟ್‌ ಅವರ ನಿವಾಸದ ಸ್ವಲ್ಪ ದೂರದಲ್ಲಿ ಬಿತ್ತು ಎಂದವರು ಹೇಳಿದರು.

ಭದ್ರತಾ ಪಡೆಗಳು ಗ್ರೆನೇಡ್‌ ಎಸೆದ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next