Advertisement

Midday Meals: ಅಕ್ಷಯ ಪಾತ್ರೆ ಫೌಂಡೇಶನ್ ಮೂಲಕ ಶಾಲೆಗಳಿಗೆ ಮಧ್ಯಾಹ್ನದ ಊಟ: ಗೋವಾ ಸಿಎಂ

03:29 PM Oct 02, 2023 | Team Udayavani |

ಪಣಜಿ: ಕೆಲವು ದಿನಗಳ ಹಿಂದೆ ಸಾವಯಿವೇರೆ, ಕೆಪೆ ಮತ್ತು ವಾಳಪೈ ಶಾಲೆಗಳಲ್ಲಿ ನೀಡಲಾದ ಮಧ್ಯಾಹ್ನದ ಊಟದಲ್ಲಿ ಫುಡ್ ಪಾಯಿಜನ್ ಅಂಶ ಪತ್ತೆಯಾದ  ಬಳಿಕ ಆಹಾರ ನೀಡುವ ಸ್ವಸಹಾಯ ಸಂಘಗಳ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.

Advertisement

ಮಕ್ಕಳ ಆರೋಗ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ರಾಜ್ಯಾದ್ಯಂತ ಶಾಲೆಗಳಿಗೆ ಗುಣಮಟ್ಟದ ಮಧ್ಯಾಹ್ನದ ಊಟವನ್ನು ಪೂರೈಸಲು ರಾಜ್ಯ ಸರ್ಕಾರವು ಅಕ್ಷಯ ಪಾತ್ರ ಸಂಸ್ಥೆಯನ್ನು ಮಂಡಳಿಗೆ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರಕಟಿಸಿದರು. ಆದರೆ, ಗುಣಮಟ್ಟದ ಆಹಾರ ಪೂರೈಸುವ ಸ್ವ-ಸಹಾಯ ಗುಂಪುಗಳು (ಎಸ್‍ಎಚ್‍ಜಿ) ತಮ್ಮ ಕೆಲಸವನ್ನು ಮುಂದುವರಿಸುತ್ತವೆ ಎಂದು ಅವರು ಹೇಳಿದರು.

ಇನ್ನು ಮುಂದೆ ಮಧ್ಯಾಹ್ನ ಬಿಸಿಯೂಟದಲ್ಲಿ ಯಾವುದೇ ತೊಂದರೆಯುಂಟಾದರೆ ಇಂತಹ ಘಟನೆಗಳನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಮಧ್ಯಾಹ್ನದ ಊಟ ನೀಡಬೇಕು. ಮಧ್ಯಾಹ್ನದ ಊಟವನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗುತ್ತಿದೆಯೇ ಹೊರತು ಬೇರೆಯವರ ಅನುಕೂಲಕ್ಕಾಗಿ ಅಲ್ಲ. ನಾವು ನೀಡುವ ಬಿಸಿಯೂಟ ವಿದ್ಯಾರ್ಥಿಗಳು ಸೇವಿಸಲು ಯೋಗ್ಯವಾಗಿರುವಂತಿರಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

ಇದನ್ನೂ ಓದಿ: Shimoga; ತಲ್ವಾರ್ ಗೆ ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂಸಮಾಜಕ್ಕೆ ಬರುತ್ತದೆ: ಈಶ್ವರಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next