Advertisement

ಮುಂಬಯಿ ಐಪಿಎಲ್ ನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಿಎಸ್ ಕೆ ವಿರುದ್ಧ ಗೆಲ್ಲಲೇಬೇಕು

04:46 PM Apr 20, 2022 | Team Udayavani |

ನವಿ ಮುಂಬಯಿ: ಈ ಐಪಿಎಲ್‌ನಲ್ಲಿ ಆರು ಸೋಲುಗಳ ನಂತರ ಹೊರಹೋಗುವ ಅಂಚಿನಲ್ಲಿರುವ ಐದು ಬಾರಿಯ ಚಾಂಪಿಯನ್ ಮುಂಬಯಿ ಇಂಡಿಯನ್ಸ್ ತಂಡವು ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಎದುರು ಮೊದಲ ಜಯವನ್ನು ಗಳಿಸಲೇಬೇಕಾಗಿದೆ.

Advertisement

ಈ ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೆ ಪರದಾಡುತ್ತಿರುವ ಮುಂಬಯಿಗೆ ಗುರುವಾರದ ಫಲಿತಾಂಶ ನಿರ್ಣಾಯಕವಾಗಿದೆ.

ಆರು ಇನ್ನಿಂಗ್ಸ್‌ಗಳಿಂದ ಕೇವಲ 114 ರನ್‌ಗಳನ್ನು ಕಲೆಹಾಕಿರುವ ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್‌ನ ದೊಡ್ಡ ಚಿಂತೆ ಮುಂಬಯಿ ತಂಡದ್ದಾಗಿದೆ. ಚೇಸ್ ಮಾಡಬೇಕಾದರೆ ಅಥವಾ ದೊಡ್ಡ ಮೊತ್ತವನ್ನು ಕಲೆಹಾಕಬೇಕಾದರೆ, ಅವರು ದೊಡ್ಡ ಮೊತ್ತವನ್ನು ಗಳಿಸಲೇಬೇಕಾಗುತ್ತದೆ.

ಭಾರೀ ಬೆಲೆ 15.25 ಕೋಟಿ ರೂ. ಪಡೆದಿರುವ ಯುವ ಬ್ಯಾಟರ್ ಇಶಾನ್ ಕಿಶನ್ ಕೂಡ  ಎರಡು ಅರ್ಧ ಶತಕಗಳ ಸಹಾಯದಿಂದ ಆರು ಪಂದ್ಯಗಳಿಂದ 191 ರನ್‌ಗಳಿಸಿದ್ದು, ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ.

ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು ವೈಯಕ್ತಿಕವಾಗಿ ಉತ್ತಮ ಆಡಿದ್ದಾರಾದರೂ ಮಧ್ಯಮ ಕ್ರಮಾಂಕದಲ್ಲಿ ಒಟ್ಟಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲಿಯವರೆಗಿನ ಮತ್ತೊಂದು ನಿರಾಶೆ ಎಂದರೆ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅವರ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಕ್ಷೀಣಿಸುತ್ತಿದೆ. ಕೇವಲ 82 ರನ್‌ಗಳೊಂದಿಗೆ, ಪೊಲಾರ್ಡ್ ಸಂಪೂರ್ಣ ವಿಫಲರಾಗಿದ್ದಾರೆ, ಅವರ ಉಳಿಸಿಕೊಳ್ಳುವಿಕೆಯ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.

Advertisement

ಮುಂಬಯಿ ಬಳಿ ಬ್ಯಾಟಿಂಗ್ ದಿಗ್ಗಜರಿದ್ದರೂ ಇನ್ನೂ ಒಂದೇ ಸಮನೆ ಸ್ಫೋಟಿಸಿಲ್ಲ.ಸಿಎಸ್‌ಕೆ ವಿರುದ್ಧ ಅದು ಸಂಭವಿಸುತ್ತದೆ ಎಂದು ಅವರು ನೀರಿಕ್ಷಿಸುತ್ತಿದ್ದಾರೆ.

ಮುಂಬೈಗೆ ಬ್ಯಾಟಿಂಗ್ ನೊಂದಿಗೆ , ಬೌಲಿಂಗ್ ಕೂಡ ಹೆಚ್ಚು ಚಿಂತೆಯಾಗಿದೆ. ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿ, ಮುಂಬೈ ಬೌಲರ್‌ಗಳು ಟೈಮಲ್ ಮಿಲ್ಸ್, ಜಯದೇವ್ ಉನದ್ಕತ್, ಬಾಸಿಲ್ ಥಂಪಿ ಅಥವಾ ಪ್ರಮುಖ ಸ್ಪಿನ್ನರ್ ಮುರುಗನ್ ಅಶ್ವಿನ್ ನೀರಿಕ್ಷಿತ ಸಾಧನೆ ತೋರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next