Advertisement

ಎಂಜಿಎಂ ಕಾಲೇಜಿಗೆ ನ್ಯಾಕ್‌ ಎ+ ಮಾನ್ಯತೆ –ಹರ್ಷಾಚರಣೆ

11:39 PM Apr 26, 2023 | Team Udayavani |

ಉಡುಪಿ: ಎಂಜಿಎಂ ಕಾಲೇಜು ನ್ಯಾಕ್‌ ಎ+ ಗ್ರೇಡ್‌ ಪಡೆ ದಿರುವ ಹಿನ್ನೆಲೆಯಲ್ಲಿ ಬುಧವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಹರ್ಷಾ ಚರಣೆಯಲ್ಲಿ ಈ ಪ್ರಕ್ರಿಯೆ ಯಲ್ಲಿ ಸಹಕರಿಸಿದವರನ್ನು ಅಭಿನಂದಿಸಲಾಯಿತು.

Advertisement

ಉಡುಪಿ ಜಿಲ್ಲಾ ಭೌಗೋಳಿಕ ಪ್ರದೇಶದಲ್ಲಿ ಆರಂಭಗೊಂಡ ಪ್ರಥಮ ಕಾಲೇಜಾದ ಎಂಜಿಎಂ ಕಾಲೇಜಿಗೆ ಹಲವು ವರ್ಷಗಳ ಸತತ ಪ್ರಯತ್ನಗಳಿಂದ ನ್ಯಾಕ್‌ ಎ+ ಶ್ರೇಣಿ ಮಾನ್ಯತೆ ದೊರಕಿದೆ. ಇದಕ್ಕಾಗಿ ಪ್ರಯತ್ನಿಸಿದ ಇಡೀ ತಂಡ ಅಭಿನಂದನೀಯ. ಮುಂದೆ ಎ++ ಗ್ರೇಡ್‌ ದೊರಕುವಂತಾಗಲು ಈಗಿಂದೀಗಲೇ ಪ್ರಯತ್ನಿಸಬೇಕು ಎಂದು ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಕರೆ ನೀಡಿದರು.

ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಸಿಗಲೂ ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅವರು ಉತ್ಸುಕರಾಗಿದ್ದು ಆ ಕುರಿತೂ ಪ್ರಯತ್ನಗಳು ನಡೆಯಲಿವೆ. ಈ ಎಲ್ಲ ಸಾಧನೆಗಳಿಗೆ ಪೂರಕವಾದ ಮೂಲ ಸೌಲಭ್ಯ, ಮಾನವ ಸಂಪನ್ಮೂಲ ಲಭ್ಯ ಇದೆ ಎಂದು ಡಾ| ಬಲ್ಲಾಳ್‌ ಹೇಳಿದರು.

ಮಾಹೆ ವಿ.ವಿ. ಸಹಕುಲಪತಿ ಡಾ| ನಾರಾಯಣ ಸಭಾಹಿತ್‌ ಮಾತನಾಡಿ, ಕಾಲೇಜಿಗೆ ಈ ಸ್ಥಾನ ಪ್ರಾಪ್ತಿಯಾಗಿರುವುದು ತಂಡ ಪ್ರಯತ್ನದ ಫ‌ಲವಾಗಿದೆ. ಯಶಸ್ಸಿನ ಹಿಂದೆ ಪ್ರಯತ್ನದ ಬಲವಿರುತ್ತದೆ. ಮುಂದಿನ ದಿನಗಳಲ್ಲಿ ಎ++ ಗ್ರೇಡ್‌ ಸಿಗುವಂತಾಗಬೇಕು ಎಂದು ಶುಭ ಕೋರಿದರು.

ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ವಹಿಸಿದ್ದರು. ಟ್ರಸ್ಟ್‌ ವಿಶ್ವಸ್ತ ಟಿ. ಅಶೋಕ್‌ ಪೈ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಪ್ರಸ್ತಾವನೆಗೈದರು. ಕಂಪ್ಯೂಟರ್‌ ಸೈನ್ಸ್‌ ವಿಭಾಗ ಮುಖ್ಯಸ್ಥ ಡಾ| ವಿಶ್ವನಾಥ ಪೈ ಸ್ವಾಗತಿಸಿ, ಐಕ್ಯೂಎಸಿ ಸಮನ್ವಯಕಾರ ಪ್ರೊ| ಅರುಣ ಕುಮಾರ್‌ ವಂದಿಸಿದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ನ್ಯಾಕ್‌ ಮಾನ್ಯತೆ ದೊರಕಲು ಸಹಕರಿಸಿದ ಹಿಂದಿನ ಪ್ರಾಂಶುಪಾಲರಾದ ಪ್ರೊ| ಕುಸುಮಾ ಕಾಮತ್‌, ಡಾ| ದೇವಿದಾಸ್‌ ನಾಯ್ಕ, ಮಾಹೆ ವಿ.ವಿ. ಅಧಿಕಾರಿಗಳಾದ ಕ್ರಿಸ್ಟೋ ಫ‌ರ್‌ ಸುಧಾಕರ್‌, ಸಂದೀಪ್‌ ಶೆಣೈ, ನಿವೃತ್ತ ಪ್ರಾಧ್ಯಾಪಕ ಡಾ| ಸುರೇಶ ರಮಣ ಮಯ್ಯ, ಏಳು ಮಾನದಂಡಗಳ ವಿಭಾಗ ಸಂಚಾಲಕರನ್ನು, ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು.ವಿನೀತ್‌ ರಾವ್‌, ಪ್ರಾಂಶುಪಾಲರು, ಐಕ್ಯೂಎಸಿ ಸಂಚಾಲಕರು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಧನುಷ್‌ ಅವರನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next