Advertisement

ಮೆಟ್ರೋ ಸೇವೆ ವ್ಯತ್ಯಯ; ಇಂದು ನಿರ್ಧಾರ

11:16 AM Dec 21, 2018 | |

ಬೆಂಗಳೂರು: ಮೆಟ್ರೋ ಮಾರ್ಗದ ದುರಸ್ತಿ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಸೇವೆ ಸ್ಥಗಿತಗೊಳಿಸುವ ಬಗ್ಗೆ ಬೆಂಗಳೂರು
ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಶುಕ್ರವಾರ ಬೆಳಗ್ಗೆ ನಿರ್ಧಾರ ಕೈಗೊಳ್ಳಲಿದೆ.

Advertisement

ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಬರುವ ಶನಿವಾರ ಮತ್ತು ಭಾನುವಾರ ಟ್ರಿನಿಟಿ ವೃತ್ತ ನಿಲ್ದಾಣದಿಂದ ಇಂದಿರಾನಗರ
ನಿಲ್ದಾಣದ ನಡುವೆ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲು ಈ ಮೊದಲು ಚಿಂತನೆ ನಡೆದಿತ್ತು. ಈ ಬಗ್ಗೆ  ಇನ್ನೂ ಪರಿಶೀಲನೆ ನಡೆಯುತ್ತಿದ್ದು, ಶುಕ್ರವಾರ ಬೆಳಗ್ಗೆ ನಿರ್ಣಯ ಕೈಗೊಳ್ಳಲಿದೆ ಎಂದು ನಿಗಮದ ವ್ಯವಸ್ಥಾಪಕ
ನಿರ್ದೇಶಕ ಅಜಯ್‌ ಸೇಠ… ಸ್ಪಷ್ಟಪಡಿಸಿದ್ದಾರೆ. 

ದುರಸ್ತಿ ಕಾರ್ಯ ಈಗಾಗಲೇ ನಡೆಯುತ್ತಿದೆ. ಆದರೆ ಇದರಲ್ಲಿ ವಿವಿಧ ಹಂತಗಳಿದ್ದು, ಕಾಮಗಾರಿ ಮಾಡುವಾಗ
ಉದ್ದೇಶಿತ ಮಾರ್ಗದಲ್ಲಿ ಮಾತ್ರ ಸಂಚಾರ ಸೇವೆ ಸ್ಥಗಿತಗೊಳಿಸಬೇಕಾಗುತ್ತದೆ. ವಾರಾಂತ್ಯದಲ್ಲಿ ಕಡಿಮೆ ಜನ
ಸಂಚರಿಸುವುದರಿಂದ ಬರುವ ಶನಿವಾರ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಈ ಸಂಬಂಧ ತಜ್ಞರ ಅಭಿಪ್ರಾಯ ಪಡೆದು, ಅಂತಿಮಗೊಳಿಸುವುದಾಗಿಯೂ ಬಿಎಂಆರ್‌ಸಿ ಸ್ಪಷ್ಟಪಡಿಸಿತ್ತು.

ಈ ಮಧ್ಯೆ “ಹನಿ ಕಾಂಬ್‌’ನಲ್ಲಿ ರಂಧ್ರಗಳ ಮೂಲಕ ಸಿಮೆಂಟ್‌ ತುಂಬುವ ಕಾರ್ಯ ನಡೆದಿದೆ. ಸಚಿವ ಡಾ.ಜಿ. ಪರಮೇಶ್ವರ ಅವರ ಸೂಚನೆ ಮೇರೆಗೆ ಬೇರಿಂಗ್‌ ಕೂಡ ಬದಲಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ವಯಾಡಕ್ಟ್ಗಳನ್ನು ಕೊಂಚ ಮೇಲಕ್ಕೆತ್ತಿ ಜೋಡಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next