Advertisement

ಬೆದರಿಕೆ :ಆತ್ಮಹತ್ಯೆಗೆ ಯತ್ನಿಸಿದ ಮೇಟಿ ರಾಸಲೀಲೆ ಸಂತ್ರಸ್ತೆ!

03:58 PM Aug 13, 2017 | |

ಬಾಗಲಕೋಟೆ : ಮಾಜಿ ಸಚಿವ, ಶಾಸಕ ಎಚ್‌.ವೈ. ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ತ ಮಹಿಳೆ ಭಾನುವಾರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Advertisement

ಮನೆಯಲ್ಲಿ 20 ನಿದ್ರೆ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದ್ದು , ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. 

ನನಗೆ ಬೆದರಿಗೆಗಳು ಬರತೊಡಗಿದ್ದು ನಾನು ಸಾಯುವುದೇ ಮೇಲು ಎಂದು ನಿದ್ರೆ ಮಾತ್ರೆ ಸೇವಿಸಿರುವುದಾಗಿ ಹೇಳಿಕೆ ನೀಡಿರುವುದಾಗಿ ಮಾದ್ಯಮಗಳಲ್ಲಿ ವರದಿಯಾಗಿದೆ. 

ಪ್ರಕರಣದಲ್ಲಿ ಮೇಟಿಗೆ ಕ್ಲೀನ್‌ ಚಿಟ್‌ ಸಿಕ್ಕಿದ ನಂತರ, ವಿವಾದವಾಗಿ ಎಂಟು ತಿಂಗಳ ಬಳಿಕ ಮಹಿಳೆ  ಆಯುಷ್‌ ಆಸ್ಪತ್ರೆಗೆ  ಕರ್ತವ್ಯಕ್ಕೆಂದು ಹಾಜರಾಗಿದ್ದರು. 

ಅಬಕಾರಿ ಸಚಿವರಾಗಿದ್ದ ಮೇಟಿ ಅವರೊಂದಿಗೆ ಮಹಿಳೆ ರಾಸಲೀಲೆಯಲ್ಲಿ ತೊಡಗಿದ್ದಾರೆಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ವಿವಾದದಿಂದ ಮೇಟಿ ಅವರು ತಮ್ಮ ಸಚಿವ ಸ್ಥಾನವನ್ನು ತೊರೆದಿದ್ದರು. 

Advertisement

ಈ ಕುರಿತು ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸಿದ್ದರು. ರಾಜಕೀಯವಾಗಿ ಮೇಟಿ ಅವರ ಹೆಸರು ಕೆಡಿಸಲು ಕೆಲವರು ಮಾಡಿದ ಕುತಂತ್ರ ಎಂದು ಸಿಐಡಿ ಕ್ಲೀನ್‌ಚಿಟ್‌ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next