Advertisement

ಲಾಕ್ ಡೌನ್ ಲೆಕ್ಕಿಸದೆ ಸಂತೆ ಮಾಡಲು ಬಂದ ವ್ಯಾಪಾರಿಗಳು : ಪೊಲೀಸರಿಂದ ತೆರವು

04:29 PM Apr 30, 2021 | Team Udayavani |

ಮೂಡುಬಿದಿರೆ : ವಾರದ ಸಂತೆಗೆ ಸದ್ಯ ಅವಕಾಶ ಇಲ್ಲ ವೆಂದು ಕಳೆದ ಶುಕ್ರವಾರವೇ ಪುರಸಭಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಮೂಡುಬಿದಿರೆ ಪುರಸಭಾ ಮಾರುಕಟ್ಟೆಗೆ ಶುಕ್ರವಾರ ಹೊರಜಿಲ್ಲೆಗಳಿಂದ  ತರಕಾರಿ, ಹಣ್ಣುಹಂಪಲು  ವ್ಯಾಪಾರಿಗಳು ಆಗಮಿಸಿ ಬೆಳಗ್ಗೆ ವ್ಯಾಪಾರ ನಿರತರಾಗಿದ್ದರು.

Advertisement

ಸುಮಾರು 9 ಗಂಟೆಗೆ ಪುರಸಭಾ ಅಧಿಕಾರಿಗಳು ಪೊಲೀಸರ ಜೊತೆ ಆಗಮಿಸಿ ಹೊರಜಿಲ್ಲೆಗಳ ಮೂವರು ವ್ಯಾಪಾರಿ ಗಳಿಗೆ ದಂಡ ವಿಧಿಸಿ ಜಾಗ ತೆರವು ಮಾಡಿಸಿದರು.

ಹತ್ತು ಗಂಟೆಯ ಬಳಿಕ ಮಾರುಕಟ್ಟೆಯಲ್ಲಿದ್ದ ಎಂದಿನ ತರಕಾರಿ ಅಂಗಡಿಗಳೂ ಒಳಗೊಂಡಂತೆ ಮೂಡುಬಿದಿರೆಯ ಎಲ್ಲ ಅವಶ್ಯಕ ಸೇವೆಗಳನ್ನು ಬಂದ್  ಮಾಡಲಾಯಿತು. ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಇದೇ ಹಿನ್ನೆಲಯಲ್ಲಿ ಪೊಲೀಸರು ಬೇರೆ ಕಡೆಯಿಂದ ಬಂದ ವ್ಯಾಪಾರಿಗಳನ್ನು ಜಾಗ ಖಾಲಿ ಮಾಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next