Advertisement

ಮಾಜಿ CM ಬಾದಲ್‌ ಹತ್ಯೆಗೆ ರೈಫ‌ಲ್‌ ಲೂಟಿ; ಖಾಲಿಸ್ಥಾನ ನಂಟು: ADG

12:00 PM Oct 16, 2018 | Team Udayavani |

ಮುಜಫ‌ರನಗರ : ಪೊಲೀಸರ ರೈಫ‌ಲ್‌ಗ‌ಳನ್ನು ಲೂಟಿಗೈದ ಆರೋಪದಲ್ಲಿ ಬಂಧಿತರಾಗಿರುವ ಮೂವರು ವ್ಯಕ್ತಿಗಳು ಖಾಲಿಸ್ಥಾನ್‌ ಲಿಬರೇಶನ್‌ ಫ್ರಂಟ್‌ ಜತೆಗೆ ನಂಟು ಹೊಂದಿದವರಾಗಿದ್ದು ಇವರು ಮಾಜಿ ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರನ್ನು ಹತ್ಯೆಗೈವ ಸಂಚು ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ತಾವು ಮಾಜಿ ಸಿಎಂ ಬಾದಲ್‌ ಅವರನ್ನು ಹತ್ಯೆ ಗೈವ ಉದ್ದೇಶದಿಂದ ಪೊಲೀಸರ ರೈಫ‌ಲ್‌ಗ‌ಳನ್ನು ಕಸಿದುಕೊಂಡಿದ್ದೆವು ಎಂದು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂಬುದಾಗಿ ಎಡಿಜಿ ಪ್ರಶಾಂತ್‌ ಕುಮಾರ್‌ ಅವರು ಶಾಮ್ಲಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

ಬಂಧಿತ ಆರೋಪಿಗಳ ಗ್ಯಾಂಗಿನ ಇನ್ನಿಬ್ಬರು ಸದಸ್ಯರು ತಲೆಮರೆಸಿಕೊಂಡಿದ್ದಾರೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next