Advertisement

ಸಂಘದ ಅಭಿವೃದ್ಧಿಗೆ ಸದಸ್ಯರು ಸಹಕರಿಸಿ

09:44 PM Sep 23, 2019 | Lakshmi GovindaRaju |

ಕೊಳ್ಳೇಗಾಲ: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಸಂಸ್ಥೆಗೆ ಸಾಕಷ್ಟು ಬದಲಾವಣೆ ತಂದು ಅಭಿವೃದ್ಧಿ ಪಡಿಸಲು ಸಂಸ್ಥೆಯ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ಸಂಸ್ಥೆಯ ಅದ್ಯಕ್ಷ ಮೆಹಬೂಬ್‌ ಷರೀಫ್ ಹೇಳಿದರು.

Advertisement

ಪಟ್ಟಣದ ಗುರುಭವನದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ 2018-19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಸಂಸ್ಥೆಯಲ್ಲಿ ಉತ್ತಮವಾಗಿ ನಡೆಯುತ್ತಿತ್ತು. ಗೋಡೋನ್‌ನಲ್ಲಿ ಅವ್ಯವಹಾರದಿಂದಾಗಿ ಗೋಡೋನ್‌ ಮುಚ್ಚಿದ ಪರಿಣಾಮ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಎತ್ತುವಳಿಗೆ ಕಡಿವಾಣ ಬಿದ್ದ ಪರಿಣಾಮ ಸುಮಾರು 4 ಲಕ್ಷ ನಷ್ಟ ರೂ. ಉಂಟಾಗಿದೆ ಎಂದರು.

ಸದಸ್ಯತ್ವ ರದ್ದು ಮಾಡಿ: ಸಂಸ್ಥೆಯ ಸದಸ್ಯ ಸೋಮಶೇಖರ್‌ ಟಿಎಪಿಸಿಎಂಎಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿ ಮತ್ತು ಸಿಬ್ಬಂದಿಯನ್ನು ಸಂಪೂರ್ಣ ಬದಲಾಯಿಸಬೇಕು ಮತ್ತು ಹನೂರು ಶಾಸಕ ಆರ್‌.ನರೇಂದ್ರ ಸಂಸ್ಥೆಯ ನಿರ್ದೇಶಕರಾಗಿದ್ದು, ಕಳೆದ 5 ವರ್ಷಗಳಿಂದ ಸಭೆಗೆ ಗೈರು ಹಾಜರಾಗಿರುತ್ತಾರೆ. ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ದೂರಿದರು.

ಏನು ಕ್ರಮ ಕೈಗೊಂಡಿದ್ದೀರಿ?: ಸದಸ್ಯ ಸತ್ತೇಗಾಲ ಗ್ರಾಮದ ರಾಜಶೇಖರ್‌ ಗೋಡೋನಿನಲ್ಲಿ ಆಗಿರುವ ಅವ್ಯವಹಾರದ ತನಿಖೆ ನಡೆದು, ಗೋಡಾನಿನ ಅಧಿಕಾರಿ ಅಮಾನತುಗೊಂಡು ಪ್ರಕರಣವು ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದಲ್ಲಿ ಪ್ರಕರಣ ಏನಾಯಿತು ಮತ್ತು ಪ್ರಕರಣಕ್ಕೆ ಈಗಾಗಲೇ ಕಾರಣರಾಗಿರುವ ಕಾರ್ಯದರ್ಶಿಗಳ ಮೇಲೆ ಯಾವ ರೀತಿ ಕ್ರಮ ಜರುಗಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಸಂಸ್ಥೆ ಹಣ ದುರ್ಬಳಕೆ: ಅದೇ ರೀತಿ ಪಾಳ್ಯ ಗ್ರಾಮ ರಂಗಸ್ವಾಮಿ ಮಾತನಾಡಿ, ಸಂಸ್ಥೆಯಲ್ಲಿ ಹಣ ದುಬಳìಕೆಯಾಗಿದ್ದು, ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವರಿಗೆ ಮಾತ್ರ ಬೋನಸ್‌ ನೀಡಲಾಗಿದೆ. ಉಳಿದವರಿಗೆ ಯಾಕೆ ನೀಡಿಲ್ಲ. ಇದೆಲ್ಲವನ್ನು ತನಿಖೆ ನಡೆಸುವಂತೆ ಸಿಒಡಿಗೆ ದೂರು ನೀಡುವ ಬೆದರಿಕೆ ಒಡ್ಡಿದ್ದಾರೆ.

Advertisement

ದೂರುಗಳ ಸುರಿಮಳೆ: ಮತ್ತೂರ್ವ ಸದಸ್ಯ ಶಿವಮೂರ್ತಿ ಸಂಸ್ಥೆ ನಡೆಸುತ್ತಿರುವ ಪೆಟ್ರೋಲ್‌ ಬಂಕ್‌ನಲ್ಲಿ ಹಣ ದುಬಳಕೆಯಾಗಿದೆ. ಸೊಸೈಟಿಯ ಹಣವನ್ನು ಸಹ ದುಬಳಕೆಯಾಗಿದ್ದು, ಕೂಡಲೇ ತನಿಖೆಯಾಗಬೇಕು. ತನಿಖೆ ಮುಗಿಯುವವರೆಗೆ ಸಂಸ್ಥೆಯ ಕಾರ್ಯದರ್ಶಿ ಲೂಸಿ ಪ್ಲಾರಿನ್‌ ಅವರನ್ನು ಅಮಾನತಿನಲ್ಲಿಟ್ಟು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ದೂರಿನ ಸುರಿಮಳೆಯನ್ನು ಸದಸ್ಯರು ಮಾಡಿದ್ದಾರೆ.

ಸಭೆಯಲ್ಲಿ ಪ್ರತಿಭಟನೆ: ಪಾಳ್ಯ ಗ್ರಾಮದ ಸದಸ್ಯ ಪರಶಿವ ಟಿಎಪಿಸಿಎಂಎಸ್‌ನಲ್ಲಿ ಸಾಕಷ್ಟು ಹಣ ದುರ್ಬಳಕೆಯಾಗಿದೆ ಹೊರತು ಸದಸ್ಯರಿಗೆ ಯಾವುದೇ ತರಹದ ಅನುಕೂಲ ಆಗಿಲ್ಲ. ಸಂಸ್ಥೆಯ ಪದಾಧಿಕಾರಿಗಳು ಹಣವನ್ನು ನುಂಗಿ ಸಂಸ್ಥೆಯ ಕಾರ್ಯದರ್ಶಿ ಕೆಲಸ ಕಳೆದುಕೊಳ್ಳುವಂತೆ ಆಗಿದ್ದು, ಈ ಎಲ್ಲಾ ಅವ್ಯವಹಾರಕ್ಕೆ ಅಧ್ಯಕ್ಷರು ಸೂಕ್ತ ಉತ್ತರ ನೀಡಬೇಕೆಂದು ಸಭೆಯ ಮುಂಭಾಗ ಪ್ರತಿಭ ಟಿಸಿ ಧರಣಿ ಕುಳಿತರು.

ಸದಸ್ಯರ ದೂರಿನಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಂಡು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ ಅಧ್ಯಕ್ಷರು, ಸಂಸ್ಥೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಮಳಿಗೆಯಲ್ಲಿ ಸಣ್ಣಪುಟ್ಟ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಸಾರ್ವಜನಿಕರ ಉಪಯೋಗಕ್ಕೆ ಉದ್ಘಾಟಿಸಲಾಗುವುದು ಎಂದರು.

ನೂತನ ಕಲ್ಯಾಣ ಮಂಟಪ: ಸರ್ವಸದಸ್ಯರು ಟಿಎಪಿಸಿಎಂಎಸ್‌ ವತಿಯಿಂದ ನೂತನ ಕಲ್ಯಾಣ ಮಂಟಪವೊಂದನ್ನು ನಿರ್ಮಿಸುವಂತೆ ಸಲಹೆ ನೀಡಿದ್ದು, ಕೂಡಲೇ ಕಲ್ಯಾಣ ಮಂಟಪವೊಂದನ್ನು ನಿರ್ಮಾಣ ಮಾಡಿ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕೊಡಲಾಗುವುದು ಎಂದು ತಿಳಿಸಿದರು.

ಸಂಸ್ಥೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ದಿವಂಗತ ಜಿ.ರಾಜೂಗೌಡರು ಮತ್ತು ಮಾಜಿ ಸಚಿವ ಎಚ್‌.ನಾಗಪ್ಪ ಅವರು ಸ್ಥಾಪಿಸಿದ ಈ ಸಂಸ್ಥೆಗೆ ಯಾವುದೇ ತರಹದ ಕಪ್ಪುಚುಕ್ಕೆ ಬರದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಸದಸ್ಯರ ಸದ್ದುಗದ್ದಲದೊಂದಿಗೆ ಸಭೆ ಮುಕ್ತಾಯಗೊಳಿಸಿದರು. ಉಪಾಧ್ಯಕ್ಷೆ ಉತ್ತಮ್ಮ, ನಿರ್ದೇಶಕರಾದ ಮಹದೇವಸ್ವಾಮಿ, ಲಿಂಗರಾಜು, ಮಹದೇವಸ್ವಾಮಿ, ಮಾದೇಶ, ಗೋಪಾಲನಾಯ್ಡು, ಮಂಜುನಾಥ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next