Advertisement

ಪ್ರತ್ಯೇಕತಾವಾದಿಗಳ ಸಂಪರ್ಕಕ್ಕೆ ಮೆಹಬೂಬಾ ಯತ್ನ!

10:15 AM Feb 10, 2020 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ವಿರುದ್ಧ ಕಠಿನ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ)ಯನ್ವಯ ಕೇಸು ದಾಖಲಿಸಲು ಅವರು ಪ್ರತ್ಯೇಕತಾ ವಾದಿ ಗಳೊಂದಿಗೆ ಕೈಜೋಡಿಸಲು ಯತ್ನಿಸಿದ್ದೇ ಕಾರಣ ಎಂಬ ಅಂಶ ಈಗ ಬಹಿರಂಗಗೊಂಡಿದೆ.

Advertisement

ಪಿಡಿಪಿ ಮುಖ್ಯಸ್ಥೆಯು ಪ್ರತ್ಯೇಕತಾವಾದಿಗಳ ಸಂಪರ್ಕ ಸಾಧಿಸಲು ಯತ್ನಿಸಿರುವುದು ತಿಳಿದುಬಂದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಅವರು ಮಾಡಿದ್ದ ಟ್ವೀಟ್‌ಗಳು ಉಗ್ರರ ಪರವಾಗಿದ್ದವು ಮತ್ತು ಸೇನೆಯ ವಿರುದ್ಧವಾಗಿದ್ದವು ಎಂದು ಹೇಳಲಾಗಿದೆ. “ಸಾವಿನ ಅನಂತರ ಉಗ್ರರಿಗೆ ಘನತೆ’ ಎಂಬ ಪದಗಳೂ ಟ್ವೀಟ್‌ನಲ್ಲಿ ಬಳಕೆಯಾಗಿದ್ದವು ಎಂದು ಆರೋಪಿಸಲಾಗಿದೆ.ಈ ನಡುವೆ, ಪಿಡಿಪಿ ನಾಯಕ ನಯೀಮ್‌ ಅಖ್ತರ್‌ ವಿರುದ್ಧವೂ ಶನಿ ವಾರ ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಒಟ್ಟು 6 ಮುಖ್ಯವಾಹಿನಿ ನಾಯಕರ ವಿರುದ್ಧ ಕಠಿನ ಕಾಯ್ದೆ ಜಡಿದಂತಾಗಿದೆ.ಇದೇ ವೇಳೆ, ಶನಿವಾರ ಕಣಿವೆ ರಾಜ್ಯದಲ್ಲಿ ಹಿಜ್ಬುಲ್‌ ಮತ್ತು ಲಷ್ಕರ್‌ಗೆ ಸೇರಿರುವ ಐವರು ಉಗ್ರರನ್ನು ಭದ್ರತಾ ಪಡೆ ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next