Advertisement

ನಾಳೆ ರಾಜ್ಯಾದ್ಯಂತ ಮೆಗಾ ಇ-ಲೋಕ ಅದಾಲತ್‌

12:36 AM Sep 18, 2020 | mahesh |

ಬೆಂಗಳೂರು: ರಾಜ್ಯದ ನ್ಯಾಯಾಂಗದ ಇತಿಹಾಸದಲ್ಲಿ ಪ್ರಥಮ ಪ್ರಯೋಗವಾಗಿ ಸೆ. 19ರಂದು ರಾಜ್ಯಾದ್ಯಂತ “ಮೆಗಾ ಇ-ಲೋಕ ಅದಾಲತ್‌’ ನಡೆಯಲಿದೆ. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ರಾಜ್ಯ ಕಾನೂನು ಸೇವೆ ಗಳ ಪ್ರಾಧಿಕಾರವು “ಡಿಜಿಟಲ್‌ ವೇದಿಕೆ’ ಕಲ್ಪಿಸಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌ ಅವರು ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.

Advertisement

ಮೊದಲ ಪ್ರಯತ್ನ
ಮೆಗಾ ಇ-ಲೋಕ ಅದಾಲತ್‌ ರಾಜ್ಯ ನ್ಯಾಯಾಂಗದ ಪ್ರಥಮ ಪ್ರಯತ್ನ. ಛತ್ತೀಸ್‌ಗಢ ರಾಜ್ಯದಲ್ಲಿ ಜಿಲ್ಲಾ ಮಟ್ಟದ ಇ-ಲೋಕ ಅದಾಲತ್‌ ನಡೆಸಲಾಗಿದೆ. ಆದರೆ ನನ್ನ ಮಾಹಿತಿಯ ಪ್ರಕಾರ ರಾಜ್ಯ ಮಟ್ಟದ ಇ-ಲೋಕ ಅದಾಲತ್‌ ದೇಶದಲ್ಲೇ ಮೊದಲ ಬಾರಿ ಎನ್ನಬಹುದು. ಸೆ. 19ರಂದು ನಡೆಯ ಲಿರುವ ಮೆಗಾ ಇ-ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ಈವರೆಗೆ 1.20 ಲಕ್ಷಕ್ಕೂ ಹೆಚ್ಚು ಪ್ರಕರಣ ಗಳನ್ನು ಗುರುತಿಸಲಾಗಿದೆ.

1,100 ಕೋರ್ಟ್‌ಗಳಲ್ಲಿ ಇ-ಲೋಕ ಅದಾಲತ್‌
ರಾಜ್ಯದ ಹೈಕೋರ್ಟ್‌ ಪೀಠಗಳು, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಒಂದೇ ದಿನ ಏಕಕಾಲಕ್ಕೆ 1,100 ಕೋರ್ಟ್‌ ಗಳಲ್ಲಿ ಇ-ಲೋಕ ಅದಾಲತ್‌ ನಡೆಯಲಿದ್ದು, 1,100 ನ್ಯಾಯಾಧೀಶರು ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಿದ್ದಾರೆ. ಈ ವಿಚಾರವಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಪೋಷಕ, ರಾಜ್ಯ ಹೈಕೋ ರ್ಟಿನ ಮುಖ್ಯ ನ್ಯಾ| ಎ.ಎಸ್‌. ಓಕಾ ಅವರ ಮಾರ್ಗದರ್ಶನದಲ್ಲಿ ಮತ್ತು ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ನ್ಯಾ| ಆಲೋಕ್‌ ಆರಾಧೆಯವರ ನೆರವಿನೊಂದಿಗೆ ಹಲವು ಸಭೆಗಳನ್ನು ನಡೆಸಲಾಗಿದೆ.

ಏನಿದು ಲೋಕ ಅದಾಲತ್‌?
ವ್ಯಾಜ್ಯಗಳನ್ನು ಎರಡೂ ಕಡೆಗಳ ಪಕ್ಷಗಾರರು ವಕೀಲರ ನೆರವಿನೊಂದಿಗೆ ನ್ಯಾಯಾಧೀಶರ ಸಮಕ್ಷಮ ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ವ್ಯವಸ್ಥೆಯೇ ಜನತಾ ನ್ಯಾಯಾಲಯ ಅಥವಾ ಲೋಕ ಅದಾಲತ್‌. ಹಲವು ವರ್ಷಗಳಿಂದ ಲೋಕ ಅದಾಲತ್‌ ಒಂದು ಚಳವಳಿಯ ರೂಪ ಪಡೆದಿದೆ. ಇದರಿಂದಾಗಿ ಇತ್ಯರ್ಥಗೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಬಾಕಿ ಪ್ರಕರಣ ಸಂಖ್ಯೆ ಕಡಿಮೆಯಾಗುತ್ತಿದೆ.

ಇ-ಲೋಕ ಅದಾಲತ್‌ ಹೇಗೆ?
ಇದರಲ್ಲಿ ವಾದಿ -ಪ್ರತಿವಾದಿಗಳು ಮತ್ತು ವಕೀಲರು ತಮ್ಮ ಕಚೇರಿ ಯಿಂದ ಅಥವಾ ಮನೆಯಿಂದ ಮೊಬೈಲ್‌ ಅಥವಾ ಇನ್ನಿತರ ವಿದ್ಯುನ್ಮಾನ ಯಂತ್ರಗಳ ಮೂಲಕ ಭಾಗವಹಿಸಬಹುದು. ಇದರ ತಾಂತ್ರಿಕ ಮಾಹಿತಿಗಳನ್ನು ಅವರಿಗೆ ಮೊದಲೇ ಕಳುಹಿಸಿ ಕೊಡಲಾಗಿರುತ್ತದೆ. ರಾಜಿ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದವರು ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸಬಹುದು. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಬಹುದು.

Advertisement

ಯಾವ ಪ್ರಕರಣ ಇತ್ಯರ್ಥ?
ನ್ಯಾಯಾಲಯಗಳಲ್ಲಿ ದಾಖಲಾಗದ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತು ಜನತಾ ನ್ಯಾಯಾಲಯಕ್ಕೆ ಕಳುಹಿಸಲ್ಪಟ್ಟ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು. ಯಾವ ಪ್ರಕರಣ ಲೋಕ ಅದಾಲತ್‌ ಮುಂದೆ ಬರಬೇಕು ಎಂದು ನ್ಯಾಯಾಧೀಶರು ತೀರ್ಮಾನಿಸು ತ್ತಾರೆ. ಅದಕ್ಕೆ ಶುಲ್ಕ ಪಾವತಿಸಬೇಕಿಲ್ಲ. ಪಾವತಿಸಿದ್ದರೆ, ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡರೆ ಶುಲ್ಕ ಮರು ಪಾವತಿಸಲಾಗುತ್ತದೆ.

ಸರ್ವರಿಗೂ ನ್ಯಾಯದ ಉದ್ದೇಶ
“ಸರ್ವರಿಗೂ ನ್ಯಾಯ’ ಎಂಬುದು ಕಾನೂನು ಸೇವೆಗಳ ಪ್ರಾಧಿಕಾರಗಳ ಧ್ಯೇಯೋದ್ದೇಶ. ಸಮಾಜದ ದುರ್ಬಲ ವರ್ಗಗಳ ಜನರಿಗೆ ಉಚಿತ ಮತ್ತು ಸಕ್ಷಮ ಕಾನೂನು ಸೇವೆಗಳನ್ನು ಒದಗಿಸುವುದರ ಮೂಲಕ, ನಾಗರಿಕರಿಗೆ ಅವರ ಆರ್ಥಿಕ ಮತ್ತಿತರ ದೌರ್ಬಲ್ಯಗಳ ಕಾರಣಕ್ಕಾಗಿ ನ್ಯಾಯ ವನ್ನು ನಿರಾಕರಿಸುವುದಿಲ್ಲ ಎಂಬು ದನ್ನು ಖಚಿತಪಡಿಸಿಕೊಳ್ಳುವ ಅರ್ಥ ಪೂರ್ಣ ಹಾಗೂ ಮಹತ್ತರ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿ ಕಾರವನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಉದ್ದೇಶ ಸಾಧನೆಯ ಮುಖ್ಯ ವಿಧಾನಗಳಲ್ಲಿ ಜನತಾ ನ್ಯಾಯಾಲಯ(ಲೋಕ ಅದಾಲತ್‌)ಗಳ ಆಯೋಜನೆಯೂ ಒಂದಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಇ-ಲೋಕ ಅದಾಲತ್‌ ಜನರ ಪಾಲಿಗೆ ಒಂದು ಸುವರ್ಣಾವಕಾಶ. ಪಕ್ಷಗಾರರು ಮತ್ತು ವಕೀಲರ ಹಿತವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅಯೋಜಿಸಲಾಗುತ್ತಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಎಸ್‌ಒಪಿಗಳನ್ನು ಪಾಲನೆ ಮಾಡಿ ಆರೋಗ್ಯ ಮತ್ತು ಸುರಕ್ಷೆಯನ್ನು ಕಾಪಾಡಿಕೊಂಡು ಪಕ್ಷಗಾರರು ತಾವಿದ್ದ ಸ್ಥಳದಿಂದಲೇ ತಮ್ಮ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಸೌಹಾರ್ದ ಯುತವಾಗಿ ಇತ್ಯರ್ಥ ಪಡಿಸಿ ಕೊಳ್ಳಬಹುದು.
– ನ್ಯಾ| ಅರವಿಂದ ಕುಮಾರ್‌, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next