Advertisement

MeeToo; ಅರ್ಜುನ್ ವಿರುದ್ಧದ ಆರೋಪದ ಹಿಂದೆ ಸೇಡು?ನಟ ಚೇತನ್ ಹೇಳೋದೇನು

04:46 PM Oct 22, 2018 | Team Udayavani |

ಬೆಂಗಳೂರು: ಮೀ ಟೂ ಅಭಿಯಾನದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ಹಿಂದೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ವೈಯಕ್ತಿಕ ಹಿತಾಸಕ್ತಿಗಾಗಿ ಆ ದಿನಗಳು ಸಿನಿಮಾದ ನಟ ಚೇತನ್ ಅವರು ಮೀ ಟೂ ಅಭಿಯಾನ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

ಪ್ರೇಮ ಬರಹ ಸಿನಿಮಾ ಮತ್ತು ಸೇಡು?

ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಪ್ರೇಮ ಬರಹ ಸಿನಿಮಾ ಬಿಡುಗಡೆಯಾಗುವ ಮುನ್ನ. ಸಿನಿಮಾದಲ್ಲಿ ಹೀರೋ ಆಗಿ ನಟಿಸಲು ನಟ ಚೇತನ್ ಗೆ 10 ಲಕ್ಷ ರೂಪಾಯಿ ನೀಡಲಾಗಿತ್ತಂತೆ. ಹೀರೋಯಿನ್ ಆಗಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಕೂಡಾ ನಟಿಸಿದ್ದರು. ಏತನ್ಮಧ್ಯೆ ಅರ್ಜುನ್ ಸರ್ಜಾ ಅವರು ನಾಯಕನ ಪಾತ್ರಕ್ಕೆ ಚಂದನ್ ಅವರನ್ನು ಆಯ್ಕೆ ಮಾಡಿದ್ದರು. ಸಿನಿಮಾ ಬಿಡುಗಡೆಯಾಗಿ, ಪ್ರೇಕ್ಷಕರ ಮನಗೆದ್ದಿತ್ತು.

ನಂತರ ಮುಂಗಡವಾಗಿ ಕೊಟ್ಟಿದ್ದ ಹತ್ತು ಲಕ್ಷ ರೂಪಾಯಿಯನ್ನು ವಾಪಸ್ ಕೊಡುವಂತೆ ಅರ್ಜುನ್ ಸರ್ಜಾ ಕೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ಚೇತನ್ ಅವರು ದ್ವೇಷ ಸಾಧಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ.

Advertisement

ನಟ ಚೇತನ್ ಹೇಳುವುದೇನೂ?

ನನ್ನ ವಿರುದ್ಧದ ಹತ್ತು ಲಕ್ಷ ರೂಪಾಯಿ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದೊಂದು ಷಡ್ಯಂತ್ರ. ನನ್ನ ಬಳಿ ಅರ್ಜುನ್ ಸರ್ಜಾ ಅವರು ದುಡ್ಡು ಕೇಳಿಯೇ ಇಲ್ಲ. ನನ್ನ ಜೊತೆ ಸರ್ಜಾ ಅವರು ಸ್ನೇಹದಿಂದಲೇ ಇದ್ದಾರೆ ಎಂದು ನಟ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next