Advertisement

ಮರಳು ಸಂಬಂಧ ಮೇ 28ಕ್ಕೆ ಸಭೆ: ಶಾಸಕ ಭಟ್‌

12:11 AM May 26, 2019 | sudhir |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೇ 28ರಂದು ಶಾಸಕರ ಸಭೆ ನಡೆಯಲಿದೆ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದ್ದಾರೆ.

Advertisement

ಮರಳುಗಾರಿಕೆ ಈ ವರ್ಷ ನಡೆಯುವ ಆಸೆ ನಮಗಿಲ್ಲ. ಕನಿಷ್ಠ ಆಗಸ್ಟ್‌ಗಾದರೂ ಆರಂಭಿಸಲು ತಯಾರಿ ಮಾಡಬೇಕು. ಆ. 1ರಿಂದ ಮರಳುಗಾರಿಕೆ ನಡೆಸಲೇಬೇಕು. ಈ ಬಗ್ಗೆ ಚರ್ಚಿಸಲು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಹಿತ ಜಿಲ್ಲೆಯ ಶಾಸಕರು ಜಿಲ್ಲಾಧಿಕಾರಿಯವರ ಜತೆ ಅಧಿಕೃತ ಸಭೆ ನಡೆಸಲಿದ್ದಾರೆ.

ಹೊಸ ಡಿಸಿಯವರು ಬಂದ ಅನಂತರ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೆವು. ಆದರೆ ಅಧಿಕೃತ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಹೊಸ ಡಿಸಿ ಬಂದಾಗ ನೀತಿ ಸಂಹಿತೆ ಜಾರಿಯಾಗಿತ್ತು. ಮೇ 27ರಂದು ಅದು ಕೊನೆಗೊಳ್ಳಲಿದೆ. ಹಾಗಾಗಿ ಮೇ 28ರಂದು ಅಧಿಕೃತ ಸಭೆ ನಡೆಸಲಾಗುತ್ತಿದೆ ಎಂದು ಭಟ್‌ ತಿಳಿಸಿದ್ದಾರೆ.

ಮರಳುಗಾರಿಕೆಗೆ ಚಿಂತನೆ
ಪ್ರ. ಕಾರ್ಯದರ್ಶಿ ಅನುಮತಿಯ ಮೇರೆಗೆ ಮೇ 15ರಂದು 7 ಮಂದಿ ಮರಳು ಹೋರಾಟ ಸಮಿತಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಿಆರ್‌ಝೆಡ್‌ನ‌ಲ್ಲಿ ವ್ಯಾಪ್ತಿಯಲ್ಲಿ ಮರುಳು ದಿಬ್ಬ ತೆರವುಗೊಳಿಸುವ ಕುರಿತು ಚರ್ಚಿಸಲಾಗಿದೆ. ಜೂ. 1ರಿಂದ ಜು 31ರ ವರೆಗೆ ಮರಳುಗಾರಿಕೆ ನಿಷೇಧವಿದೆ. ಈ ಎರಡು ತಿಂಗಳ ಅವಧಿಯಲ್ಲಿ ಕಾನೂನು ವ್ಯಾಪ್ತಿಯಲ್ಲಿ ಶೀಘ್ರದಲ್ಲಿ ಮರಳುಗಾರಿಕೆ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next