Advertisement

ಕಾರ್ಪೊರೇಟರ್‌ಗಳ ಸಭೆ

11:20 AM Dec 07, 2017 | Team Udayavani |

ಮಲ್ಲಿಕಟ್ಟೆ: ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ ಮಂಗಳೂರು ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ 12.5 ಕೋ.ರೂ.ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಆರ್‌. ಲೋಬೋ ತಿಳಿಸಿದರು.

Advertisement

ತಮ್ಮ ಕಚೇರಿಯಲ್ಲಿ ಕಾರ್ಪೊರೇಟರ್‌ ಗಳ ಸಭೆ ನಡೆಸಿದ ಅವರು, ಈ ಅನುದಾನದ ಪೈಕಿ 10 ಕೋ.ರೂ. ಸಾಮಾನ್ಯವಾಗಿದ್ದು, ಉಳಿದ 2.5 ಕೋ. ರೂ. ಗಳನ್ನು ಅಲ್ಪಸಂಖ್ಯಾಕರು ಹೆಚ್ಚಿರುವ ಪ್ರದೇಶಗಳ ರಸ್ತೆ ಡಾಮರು ಕಾಮಗಾರಿಗೆ ಬಳಸಲಾಗುವುದು. ಅನುದಾನವನ್ನು ಡಾಮರು ಕಾಮಗಾರಿಗೆ ಮಾತ್ರವೇ ವಿನಿಯೋಗಿಸಬೇಕೇ ಹೊರತು ಕಾಂಕ್ರೀಟ್‌ ರಸ್ತೆಗಳಿಗೆ ಬಳಸುವಂತಿಲ್ಲ ಎಂದರು.

ಸ್ಥಳೀಯರ ಸಹಕಾರ ಮುಖ್ಯ
ಕಾರ್ಪೊರೇಟರ್‌ಗಳು ಅನುದಾನ ಬಳಸಿಕೊಳ್ಳುವ ಕುರಿತು ಮುಂಚಿತವಾಗಿ ಪಟ್ಟಿ ಕೊಡಬೇಕು. ಜತೆಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಯಾರ ವಾರ್ಡ್‌ಗೆ ಅಗತ್ಯವಿದೆ ಎಂದು ತಿಳಿದುಕೊಂಡು ಆದ್ಯತೆಯ ನೆಲೆಯಲ್ಲಿ ಪಟ್ಟಿ ತಯಾರಿಸುವಂತೆ ಸೂಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next