Advertisement

ಸೈಕ್ಲೋನ್ ಹಿನ್ನಲೆ ಕಾರ್ಕಳ ಶಾಸಕರಿಂದ ತುರ್ತು ಸಭೆ

05:48 PM May 15, 2021 | Team Udayavani |

ಕಾರ್ಕಳ: ತೌಕ್ತೇ ಚಂಡಮಾರುತ  ಹಿನ್ನಲೆಯಲ್ಲಿ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಶನಿವಾರ ತಮ್ಮ ಕಚೇರಿ ವಿಕಾಸದಲ್ಲಿ ವಿಧಾನ ಸಭಾ ಕ್ಷೇತ್ರದ ಎಂಟು ಸೆಕ್ಷನ್ ಗಳ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದರು.

Advertisement

ಚಂಡಮಾರುತ ಸಂದರ್ಭ ಹಾಗೂ ಮುಂದಿನ ಮಾನ್ಸೂನ್ ಅವಧಿಯಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ವಿದ್ಯುತ್ ಸರಬರಾಜು ಹಾಗೂ ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸುವುದು ಮತ್ತು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಶಾಸಕ ವಿ.ಸುನೀಲ್ ಕುಮಾರ್  ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಗಾಳಿ, ಮಳೆ, ಸಿಡಿಲು, ಮಿಂಚು ಹೆಚ್ಚಿರುವ ಸಂದರ್ಬ ಸೊತ್ತು ಹಾನಿ, ಜೀವ ಹಾನಿ ಸಂಭವಿಸುವ ಸಾಧ್ಯತೆಗಳಿವೆ. ಇವುಗಳ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

ಅಗತ್ಯ ಸಿಬಂದಿ..ಮೆಟಿರಿಯಲ್ ಸಿದ್ದಪಡಿಸಿಕೊಳ್ಳುವಂತೆ ಸೂಚಿಸಿದರಲ್ಲದೆ ಮೆಸ್ಕಾಂ ಎಂ.ಡಿ ಗೆ ಕರೆ ಮಾಡಿ ಕಾರ್ಕಳ, ಹೆಬ್ರಿ ಒಳಗೊಂಡು ವಿಧಾನಸಭಾ ಕ್ಷೇತ್ರಕ್ಕೆ  ಬೇಕಿರುವ ಅಗತ್ಯ ಮೆಟಿರಿಯಲ್ ಒದಗಿಸುವಂತೆ ಸೂಚಿಸಿದೆರು.

Advertisement

Udayavani is now on Telegram. Click here to join our channel and stay updated with the latest news.

Next