Advertisement

UPSC ಮೊದಲ ಯತ್ನದಲ್ಲೇ 151ನೇ ರ್‍ಯಾಂಕ್‌: ಕಿರಿಯ ವಯಸ್ಸಲ್ಲೇ ಸಾಧನೆ

08:05 AM May 01, 2018 | Team Udayavani |

ಹೊಸದಿಲ್ಲಿ: ಅತಿಕಿರಿಯ ವಯಸ್ಸಿನಲ್ಲೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣಳಾಗುವ ಮೂಲಕ ಕೇರಳದ ಯುವತಿಯೊಬ್ಬಳು ಈಗ ದೇಶದ ಗಮನ ಸೆಳೆದಿದ್ದಾಳೆ. ಕೊಲ್ಲಂನ 22ರ ಯುವತಿ ಸುಶ್ರೀ, ಯುಪಿಎಸ್‌ಸಿ ಮೊದಲ ಪ್ರಯತ್ನದಲ್ಲೇ 151ನೇ ರ್‍ಯಾಂಕ್‌ ಪಡೆದಿದ್ದಾಳೆ. ಈಕೆಯ ತಂದೆ ಸುನಿಲ್‌ಕುಮಾರ್‌, ಕೇಂದ್ರ ಮೀಸಲು ಪೊಲೀಸ್‌ ಪಡೆಯ ನಿವೃತ್ತ ಯೋಧರಾಗಿದ್ದು, ಡಾ.ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರ ಭದ್ರತಾ ತಂಡದಲ್ಲೂ ಕಾರ್ಯನಿರ್ವಹಿಸಿದ್ದರು.

Advertisement

2008ರಲ್ಲಿ ಪ್ರಧಾನಿ ಸಿಂಗ್‌ ಭೇಟಿಯನ್ನು ಮೆಲುಕು ಹಾಕಿಕೊಂಡ ಸುಶ್ರೀ, ’14ನೇ ವಯಸ್ಸಿನಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಅವರ ಪತ್ನಿ ಗುರುಶರಣ್‌ ಕೌರ್‌ ಅವರಿಗೆ ಹೂಗುಚ್ಛ ನೀಡುವ ಅವಕಾಶ ಸಿಕ್ಕಿತ್ತು. ಆಗ ಪ್ರಧಾನಿ ಸಿಂಗ್‌, ನಿನ್ನ ಕನಸು ಏನು ಎಂದು ಕೇಳಿದ್ದರು. ಆಗ ನಾನು ಸಿವಿಲ್‌ ಸರ್ವೆಂಟ್‌ ಆಗಬೇಕೆಂದುಕೊಂಡಿದ್ದೇನೆ ಎಂದಾಗ, ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದರು. ಅದು ನನಗೆ ಸಂತೋಷ ನೀಡಿದ್ದರ ಜತೆಗೆ ಪ್ರೇರಣೆ ಕೂಡ ಆಯಿತು’ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೆ, ತಂದೆಯ ಸೇವಾ ನಿಷ್ಠೆಯೂ ಆಕೆಯ ಮೇಲೆ ಪ್ರಭಾವ ಬೀರಿದೆಯಂತೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಸುಶ್ರೀಗೆ ತನ್ನ ಬಂಧುಗಳು, ಸ್ನೇಹಿತರು ಫೋನ್‌ ಮಾಡಿ, ಮನೆಗೆ ಬಂದು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಸಿಆರ್‌ಪಿಎಫ್, ಎಸ್‌ಪಿಜಿ ಹಿರಿಯ ಅಧಿಕಾರಿಗಳು ಸಹ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next