Advertisement

30 ವರ್ಷದ ಏಕಾಂಗಿ ಪರಿಶ್ರಮ: ಬೆಟ್ಟದ ನೀರು ಹಳ್ಳಿಗೆ ತಂದ ಭಗೀರಥ

12:20 PM Sep 14, 2020 | sudhir |

ಪಟ್ನಾ: ಬಿಹಾರದ ಗಯಾ ಜಿಲ್ಲೆಯ ಗೆಹ್ಲಾರ್‌ ಎಂಬ ಹಳ್ಳಿ ಯಲ್ಲಿ ಬೆಟ್ಟವೊಂದನ್ನು ಸುತ್ತಿಗೆ, ಹಾರೆಗಳಿಂದ ಏಕಾಂಗಿಯಾಗಿ ಕಡಿದು ನಡುವೆ ರಸ್ತೆ ಮಾಡಿದ ದಶರಥ್‌ ಮಾಂಝಿ ಎಂಬ ವ್ಯಕ್ತಿಯನ್ನು ಬಹುಶಃ ಯಾರೂ ಮರೆತಿರಲಾರರು. ಅವರಂತೆಯೇ, ಅದೇ ಗಯಾ ಜಿಲ್ಲೆಯ ಲಾಹುವಾ ಪ್ರಾಂತ್ಯದ ಕೋಥಿ ಲಾವಾ ಎಂಬ ಹಳ್ಳಿಯಲ್ಲಿ ಲೌಂಗಿ ಭುಇಯಾ ಎಂಬ ವ್ಯಕ್ತಿ ತಮ್ಮ ಹಳ್ಳಿಯ ಹತ್ತಿರದ ಬೆಟ್ಟಗಳ ಮೇಲೆ ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ತನ್ನ ಹಳ್ಳಿಯ ಹೊಲಗಳಿಗೆ ಹಾಯಿಸಲು ಸುಮಾರು 3 ಕಿ.ಮೀ. ದೂರದವರೆಗೆ ಏಕಾಂಗಿಯಾಗಿ ಕಾಲುವೆ ತೋಡಿದ ಸಾಧನೆ ಮಾಡಿದ್ದಾರೆ.

Advertisement

ದಟ್ಟ ಕಾಡುಗಳಾಚೆ ಗಿನ ಬೆಟ್ಟದಿಂದ ತನ್ನ ಹಳ್ಳಿಯ ಕೆರೆಗೆ ಬೆಟ್ಟದ ನೀರು ತರಲು ಆತ ತೆಗೆದುಕೊಂಡದ್ದು ಬರೋಬ್ಬರಿ 30 ವರ್ಷ. ಪ್ರತಿ ದಿನವೂ ಗೋವುಗಳನ್ನು ಮೇಯಲು ಅರಣ್ಯದ ಕಡೆಗೆ ಕರೆದುಕೊಂಡು ಹೋಗುತ್ತಿದ್ದ ಅವರಿಗೆ ಮಳೆಗಾಲದಲ್ಲಿ ಬೆಟ್ಟಗಳ ಮೇಲಿನ ನೀರು ಒಂದೆಡೆ ಸಂಗ್ರಹವಾಗಿ, ಆನಂತರ ತೊರೆಯಾಗಿ ಹರಿದು ಹೋಗುತ್ತಿದ್ದುದು ಗಮನಕ್ಕೆ ಬಂದಿತ್ತು. ಅದನ್ನು ಹೇಗಾದರೂ ಮಾಡಿ ತನ್ನ ಹಳ್ಳಿಯ ಕಡೆಗೆ ಹರಿಸಬೇಕು ಎಂದು ಅವರು ಮನಸ್ಸು ಮಾಡಿದ್ದರು.

ಇದನ್ನು ಹಳ್ಳಿಯವರ ಬಳಿ ಹೇಳಿಕೊಂಡಾಗ ಯಾರೂ ಅವರ ಆಲೋಚನೆಗೆ ಓಗೊಡಲಿಲ್ಲ. ಆದರೂ, ವಿಮುಖರಾಗದ ಅವರು ಪ್ರತಿದಿನ ಗೋವುಗಳು ಮೇಯುವಷ್ಟರಲ್ಲಿ ತನ್ನ ಕೈಲಾದಷ್ಟು ನೆಲವನ್ನು ತೋಡಿ, ಹಂತ ಹಂತವಾಗಿ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next