Advertisement

ಎಲುಬು ಕ್ಯಾನ್ಸರ್‌ಗೆ ತುತ್ತಾದ ಚಾಲಕನಿಗೆ ಬೇಕಿದೆ ನೆರವು

05:35 AM Jul 30, 2017 | Team Udayavani |

ಕಾರ್ಕಳ: ತಾಲೂಕು ಸಾಣೂರು ಗ್ರಾಮದ ದೇಂದಬೆಟ್ಟುವಿನ ನಿವಾಸಿ ದಯಾನಂದ ಪೂಜಾರಿ ಅವರು ಕಳೆದ ಹತ್ತು ವರ್ಷಗಳಿಂದ ಕುಂಟಲ್ಪಾಡಿ ಪರಿಸರದಲ್ಲಿ ಟೆಂಪೋ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದು,  ಕಳೆದ 1 ವರ್ಷದಿಂದ ಎಲುಬು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದೀಗ ಕೆಎಂಸಿ ಅತ್ತಾವರದಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲಾಗದೇ ಅಸಹಾಯಕರಾಗಿದ್ದಾರೆ. ಇವರ ಮಡದಿ ಬೀಡಿಕಟ್ಟುವ ಕೆಲಸ ಮಾಡುತ್ತಿದ್ದು 11 ವರ್ಷದ ಮಗಳು ಹಾಗೂ 5 ವರ್ಷದ ಮಗನಿದ್ದು  ಚಿಕಿತ್ಸಾ ವೆಚ್ಚ ಭರಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಇವರ ಅಸಹಾಯಕ ಪರಿಸ್ಥಿತಿಗೆ ಸಹೃದಯಿಗಳು ನೆರವಾಗಿ ಚಿಕಿತ್ಸಾ ವೆಚ್ಚ ಭರಿಸಿದರೆ ಜೀವವೊಂದು ಉಳಿಯುತ್ತದೆ.

Advertisement

ನೆರವು ನೀಡಲು
ದಯಾನಂದ ಪೂಜಾರಿ, ಐದು ಸೆಂಟ್ಸ್‌ ಕಾಲನಿ, ದೇಂದಬೆಟ್ಟು, ಸಾಣೂರು ಗ್ರಾಮ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ; ಮೊ: 8197119754 ಸಂಪರ್ಕಿಸಬಹುದು ಅಥವಾ ಈ ಖಾತೆಗೆ ವೆಚ್ಚ ಜಮಾ ಮಾಡಬಹುದು. A/C No: 20345998541, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಾರ್ಕಳ ಅನಂತಶಯನ ಶಾಖೆ,  IFSC Code: SBINN0005189

Advertisement

Udayavani is now on Telegram. Click here to join our channel and stay updated with the latest news.

Next