Advertisement

ಕರುಣಾಕರ ಪೂಜಾರಿ ಬಾವುಳ್ಳ ಬಲಗೈ ಶಸ್ತ್ರಚಿಕಿತ್ಸೆ ನೆರವಿಗೆ ಮನವಿ

12:17 AM Jul 02, 2018 | Team Udayavani |

ಉಡುಪಿ: ಮಣಿಪಾಲದ ಬಡಗುಬೆಟ್ಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕರುಣಾಕರ ಪೂಜಾರಿ ಕಳೆದೆರಡು ತಿಂಗಳಿನಿಂದ ಬಾವುಳ್ಳ ಬಲಗೈ (ಎಬ್ಸೆಸ್‌) ರೋಗದಿಂದ ಬಳಲುತ್ತಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಚಿಕಿತ್ಸೆಗೆ ಆರ್ಥಿಕ ನೆರವಿಗೆ ಅವರ ಕುಟುಂಬ ಮನವಿ ಮಾಡಿದೆ.

Advertisement

ಚಿಕ್ಕ ಸಂಸಾರ ಹೊಂದಿದ ಕರುಣಾಕರ ಪೂಜಾರಿ ಅವರು ಬೆಳಗಾವಿಯಲ್ಲಿ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ, ಇಬ್ಬರು ಪುತ್ರಿಯರೊಂದಿಗೆ ಜೀವನ ನಡೆಸುತ್ತಿದ್ದಾರೆ. ಬಾವುಳ್ಳ ಬಲಗೈಗೆ (ಎಬ್ಸೆಸ್‌) ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸುವಷ್ಟು ಶಕ್ತಿ ಇಲ್ಲದೆ ಕುಟುಂಬ ಕಂಗಾಲಾಗಿದೆ. ಇದ್ದ ಹಣವನ್ನೆಲ್ಲ ಎರಡು ತಿಂಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆ ಖರ್ಚು ಮಾಡಿದ ಕುಟುಂಬಕ್ಕೆ ಮನೆ ಬಾಡಿಗೆ, ಮಕ್ಕಳಿಬ್ಬರ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ.

ಸಂಸಾರಕ್ಕೆ ಆಸರೆಯಾದ ಕರುಣಾಕರ ಪೂಜಾರಿ ಅವರ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡುವವರು ಸಿಂಡಿಕೇಟ್‌ ಬ್ಯಾಂಕ್‌ ಖಾತೆ ಸಂಖ್ಯೆ: 05292010033279, IFSC ಕೋಡ್‌: SYNB0000529 ಇದಕ್ಕೆ ಹಣ ಕಳುಹಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next