Advertisement

ಬೆಳ್ತಂಗಡಿ: ವಿದ್ಯಾರ್ಥಿಯ ಚಿಕಿತ್ಸೆಗೆ ನೆರವು ಯಾಚನೆ

02:20 AM Jun 13, 2018 | Karthik A |

ಬೆಳ್ತಂಗಡಿ: ಉರುವಾಲು ಗ್ರಾಮದ ಹಲೇಜಿಯಲ್ಲಿ ವಾಸವಾಗಿರುವ ಶಾಂತಪ್ಪ ಅವರ ಪುತ್ರ, ಗೇರುಕಟ್ಟೆ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಭವಿತ್‌ ಕುಮಾರ್‌ ಅವರು ಡೆಂಗ್ಯೂ ಜ್ವರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹು ಅಂಗಾಗ ವೈಫಲ್ಯ, ಡಯಾಲಿಸಿಸ್‌ ಇತ್ಯಾದಿ ಚಿಕಿತ್ಸೆ ಮತ್ತು ಔಷಧೋಪಚಾರಗಳಿಗೆ ಈಗಾಗಲೇ ಸುಮಾರು 3 ಲಕ್ಷ ರೂ. ವ್ಯಯಿಸಿದ್ದು, ಚಿಕಿತ್ಸೆಗೆ ಇನ್ನೂ ಅಧಿಕ ಮೊತ್ತದ ಆವಶ್ಯಕತೆ ಇರುವುದರಿಂದ ಬಡ ಕುಟುಂಬಕ್ಕೆ ಆರ್ಥಿಕ ನೆರವು ಬೇಕಿದೆ.

Advertisement

ಆರ್ಥಿಕ ಸಹಾಯ ಮಾಡಲಿಚ್ಛಿಸುವವರು ಭವಿತ್‌ ಕುಮಾರ್‌, ಕೆನರಾ ಬ್ಯಾಂಕ್‌ ಪದ್ಮುಂಜ ಶಾಖೆಯ ಎಸ್‌.ಬಿ. ಖಾತೆ 1599101010787 (IFSC: CNRB0001599)ಗೆ ಜಮಾ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next