Advertisement

ರಂಗಭೂಮಿ ಬೌದ್ಧಿಕ ವಿಕಾಸಕ್ಕೆ ಮಾಧ್ಯಮ: ಸುಧಾ ಅಡುಕುಳ

01:00 AM Feb 07, 2019 | Team Udayavani |

ಕೋಟ: ಉತ್ತಮ ನಾಟಕಗಳು ಮಾನವನ ಬೌದ್ಧಿಕ ವಿಕಾಸಕ್ಕೆ ಸಹಕಾರಿ. ರಂಗಚಟುವಟಿಕೆಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ರಂಗ ಸಾಹಿತಿ ಸುಧಾ ಅಡುಕುಳ ಅಭಿಪ್ರಾಯಪಟ್ಟರು.

Advertisement

ಸುಬ್ಬಣ್ಣ ಸಿಂಧು ಟ್ರಸ್ಟ್‌ ಬನ್ನಾಡಿ, ರಂಗ ಸಂಪದ ಕೋಟ ಸಂಯುಕ್ತ ಆಶ್ರಯದಲ್ಲಿ, ವಿವಿಧ ಸಂಘಟನೆಗಳ ಸಹಕಾರದಲ್ಲಿ ಮಂಗಳವಾರ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಜನ್ಮಶತಾಬ್ದ ಸ್ಮಾರಕ ಭವನದಲ್ಲಿ ಆಯೋಜಿಸಿದ ನೀನಾಸಂ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಟ್ರಸ್ಟ್‌ನ ಅಜಿತ್‌ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗಸಂಪದ ಅಧ್ಯಕ್ಷ ಕೃಷ್ಣ ಸಾಸ್ತಾನ, ಇಲೆವೆನ್‌ಅಪ್‌ ನ್ಪೋರ್ಟ್ಸ್ ಕ್ಲಬ್‌ ಕೋಟ ಅಧ್ಯಕ್ಷ ಅನಿಲ್‌ ಹಂದೆ, ಯಕ್ಷದೇಗುಲ ಸಂಚಾಲಕ ಸುದರ್ಶನ ಉರಾಳ, ಯಶಸ್ವಿ ಕಲಾವೃಂದ ಕೊಮೆಯ ವೆಂಕಟೇಶ್‌ ವೈದ್ಯ, ಕೈಲಾಸ ಕಲಾಕ್ಷೇತ್ರ ರಂಗ ತಂಡ ತೆಕ್ಕಟ್ಟೆಯ ಜಯಸುದರ್ಶನ್‌, ಪ್ರಶಾಂತ್‌ ಮಲ್ಯಾಡಿ ಹಾಗು ಸುಬ್ರಾಯ ನಾಯರಿ, ಅಶಿತ್‌ ಕುಮಾರ್‌ ಶೆಟ್ಟಿ ಲಂಬೋದರ ಹೆಗಡೆ, ನಾಗೇಂದ್ರ ಐತಾಳ್‌ ಉಪಸ್ಥಿತರಿದ್ದರು.

ರಾಘವೇಂದ್ರ ತುಂಗ ಸ್ವಾಗತಿಸಿ, ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿ, ಉಪನ್ಯಾಸಕ ಸತ್ಯನಾರಾಯಣ ತೆಕ್ಕಟ್ಟೆ ವಂದಿಸಿದರು. ಇಲೆವನ್‌ ಅಪ್‌ ನ್ಪೋಟ್ಸ್‌ ಕ್ಲಬ್‌ ಕೋಟ, ಯಕ್ಷದೇಗುಲ ಬೆಂಗಳೂರು, ಯಶಸ್ವಿ ಕಲಾವೃಂದ ಕೊಮೆ,  ಕೈಲಾಸ ಕಲಾ ರಂಗ ತಂಡ ತೆಕ್ಕಟ್ಟೆ ಸಂಸ್ಥೆಗಳು  ಸಹಕಾರ ನೀಡಿದವು.

Advertisement

Udayavani is now on Telegram. Click here to join our channel and stay updated with the latest news.

Next