Advertisement

ನೌಕರಿಗಾಗಿ ಕಾಯುತ್ತಿರುವ  ಏಶ್ಯಾಡ್‌ ಪದಕ ವಿಜೇತೆ

07:33 AM Oct 05, 2018 | Team Udayavani |

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಸ್ಟಿಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸುಧಾ ಸಿಂಗ್‌ ಸರಕಾರಿ ಕೆಲಸವಿಲ್ಲದೆ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಸುಧಾ ಸಿಂಗ್‌ ಏಶ್ಯಾಡ್‌ನಲ್ಲಿ ಬೆಳ್ಳಿ ಗೆದ್ದ ಬಳಿಕ ಉತ್ತರ ಪ್ರದೇಶ ಸರಕಾರ ಸರಕಾರಿ ಕೆಲಸ ನೀಡುವ ಭರವಸೆ ನೀಡಿತ್ತು.

Advertisement

“ಏಶ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಬಳಿಕ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆ. ಡಿಎಸ್‌ಪಿಯಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ನಾನು ಕ್ರೀಡಾ ವಿಭಾಗದಲ್ಲಿ ಉಪ ನಿರ್ದೇಶಕ ಹುದ್ದೆ ಬೇಕೆಂದು ಮನವಿ ಸಲ್ಲಿಸಿದ್ದೆ. ಈ ಮನವಿಗೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೆಲಸಕ್ಕಾಗಿ ಇನ್ನೂ ಕಾಯುತ್ತಿರುವುದು ದುರದೃಷ್ಟ. ಆದರೆ ನನಗೆ ಮುಖ್ಯ ಮಂತ್ರಿಗಳಲ್ಲಿ ಸಂಪೂರ್ಣ ನಂಬಿಕೆ ಇದೆ. ಯಾವುದೇ ವಿಭಾಗದಲ್ಲಿ ಕೆಲಸ ಸಿಕ್ಕರೂ ಮಾಡಲು ನಾನು ಸಿದ್ದಳಾಗಿದ್ದೇನೆ. ಅವರ ನಿರ್ಧಾರ ನನಗೆ ಉಪಯೋಗವಾಗುತ್ತದೆ ಎಂದು ನಂಬಿದ್ದೇನೆ’ ಎಂದು ಸುಧಾಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next