Advertisement

ಗಾಂಧಿ ಜಯಂತಿಯಂದು ಮಾಂಸ ಮಾರಾಟ: ಕೆಎಫ್ಸಿ ವಿರುದ್ಧ ಎಫ್ಐಆರ್‌

11:57 AM Oct 03, 2017 | Team Udayavani |

ಬೆಂಗಳೂರು: ನಿಯಮ ಉಲ್ಲಂ ಸಿ ಗಾಂಧಿಜಯಂತಿಯಂದು ಮಾಂಸ ಮಾರಾಟ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿಯ ವಾಣಿವಿಲಾಸ ರಸ್ತೆಯಲ್ಲಿರುವ ಕೆಎಫ್ಸಿ ಮ್ಯಾನೇಜರ್‌ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

ಗಾಂಧಿಜಯಂತಿಯಂದು ಮಾಂಸ ಮಾರಾಟ ಮಾಡಬಾರದೆಂಬ ನಿಯಮಜಾರಿಯಿದೆ. ಆದರೆ, ಸೋಮವಾರ ಮಧ್ಯಾಹ್ನ ವಾಣಿವಿಲಾಸ ರಸ್ತೆಯಲ್ಲಿರುವ ಕೆಎಫ್ಸಿಯಲ್ಲಿ ಚಿಕನ್‌ ಮಾರಾಟ ಮಾಡಲಾಗಿದೆ. ಇದನ್ನು ಖುದ್ದು ನೋಡಿದ್ದೇನೆ ಎಂದು ಸ್ಥಳೀಯರಾದ ಶ್ರೀನಿವಾಸ್‌ ಎಂಬಾತ  ಬಸವನಗುಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೆಎಫ್ಸಿ ಸಿಬ್ಬಂದಿಯನ್ನು ಕರೆದು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

ಸರ್ಕಾರದ ನಿಯಮವನ್ನು ಉಲ್ಲಂ ಸಿ, ಜನರ ಭಾವನೆಗಳಿಗೆ ತಂದ ಆರೋಪ ಸಂಬಂಧ ಕೆಎಫ್ಸಿ ಮ್ಯಾನೇಜರ್‌ ದಿಲೀಪ್‌ಕುಮಾರ್‌ ಸೇರಿದಂತೆ ನಾಲ್ವರ ವಿರುದ್ಧ ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 103 ಅನ್ವಯ ಎಫ್ಐಆರ್‌ ದಾಖಲಿಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next