Advertisement

ಬಸವೈಕ್ಯ ಪುಣ್ಯಸ್ಥಳ ದರ್ಶಿಸಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್

09:30 AM May 03, 2022 | Team Udayavani |

ವಿಜಯಪುರ: ಬಸವ ಜಯಂತಿ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ಕೂಡಲಸಂಗಮದ ಬಸವೈಕ್ಯ ಪುಣ್ಯಸ್ಥಳ ದರ್ಶಿಸಿ, ಪೂಜೆ ಸಲ್ಲಿಸಿದರು.

Advertisement

ಮಂಗಳವಾರ ಬೆಳಗಿನ ಜಾವ ಬಸವೈಕ್ಯ ಸ್ಥಳಕ್ಕೆ ಭೇಟಿ ನೀಡಿ, ಇಷ್ಟಲಿಂಗ ಪೂಜೆ ಸಲ್ಲಿಸಿದರು.

ಇದನ್ನೂ ಓದಿ:ಮಹತ್ವದ ಬೆಳವಣಿಗೆ : ಬಿಎಸ್ ವೈ ಭೇಟಿ ಮಾಡಿದ ಸಿಎಂ, ಡಿಸಿಎಂ ಹುದ್ದೆ ಸೃಷ್ಟಿ ಸಾಧ್ಯತೆ?

ಈ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಇಷ್ಟಲಿಂಗ ಪೂಜೆ ಹಾಗೂ ಬಸವ ಸ್ತುತಿ ಹಾಗೂ ವಚನಾಮೃತ ನೀಡಿದರು. ಇದೇ ವೇಳೆ ಬಸವೇಶ್ವರ ಆರಾಧ್ಯ ದೈವ ಕೂಡಲಸಂಗಮನಾಥನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

Advertisement

ಈ ವೇಳೆ ಬಿ.ಎಲ್.ಡಿ.ಇ. ಸಂಸ್ಥೆಯ ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next