Advertisement

ಎಂಬಿಪಿ ಪಾಟೀಲ್-ಮಾಧುಸ್ವಾಮಿ ವಾಗ್ವಾದ

10:27 AM Jul 20, 2019 | Team Udayavani |

ವಿಧಾನಸಭೆ: ಮುಂಬೈನಲ್ಲಿರುವ ಶಾಸಕರನ್ನು ವಾಪಸ್‌ ಕರೆ ತರುವ ವಿಷಯದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಬಿಜೆಪಿ ಸದಸ್ಯ ಜೆ.ಸಿ.ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ಶ್ರೀಮಂತ ಪಾಟೀಲ್‌ ಅವರ ಬಗ್ಗೆ ಮಾಹಿತಿ ನೀಡುವಂತೆ ಸ್ಪೀಕರ್‌ ನೀಡಿದ್ದ ಸೂಚನೆಯ ಮೇರೆಗೆ ಸದನಕ್ಕೆ ಮಾಹಿತಿ ನೀಡಲು ಗೃಹ ಸಚಿವ ಎಂ.ಬಿ. ಪಾಟೀಲ್‌ ಸಮಯ ಕೇಳಿದ್ದರು. ಆ ಸಂದರ್ಭದಲ್ಲಿ ಜೆ.ಸಿ.ಮಾಧುಸ್ವಾಮಿ, ಮುಂಬೈನಲ್ಲಿನ ಶಾಸಕರನ್ನು ವಾಪಸ್‌ ಕರೆಸುವ ವಿಷಯದಲ್ಲಿ ಗೃಹ ಸಚಿವರು ಮಧ್ಯಸ್ಥಿಕೆ ವಹಿಸಲು ಬರುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಅಸಮಾಧಾನಗೊಂಡ ಎಂ.ಬಿ.ಪಾಟೀಲ್‌, ಗೃಹ ಸಚಿವನಾಗಿ ಸ್ಪೀಕರ್‌ ಸೂಚನೆ ಮೇರೆಗೆ ಸದನಕ್ಕೆ ಮಾಹಿತಿ ನೀಡುವುದು ನನ್ನ ಜವಾಬ್ದಾರಿ. ಬೇರೆಯವರ ಮೇಲೆ ನಡೆಸಿದಂತೆ ನಿಮ್ಮ ಪಾಂಡಿತ್ಯ ನನ್ನ ಮೇಲೆ ನಡೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಆಡಳಿತ ಪಕ್ಷದ ಸದಸ್ಯರು ಎಂ.ಬಿ.ಪಾಟೀಲ್‌ ಬೆಂಬಲಕ್ಕೆ ನಿಂತರು. ಬಿಜೆಪಿಯ ಸುರೇಶ್‌ ಕುಮಾರ್‌ ಮಾಧುಸ್ವಾಮಿ ಬೆಂಬಲಕ್ಕೆ ಬಂದರು. ಮಾತಿನ ಚಕಮಕಿ ನಡೆಯಿತು. ಸ್ಪೀಕರ್‌ ಮಧ್ಯೆ ಪ್ರವೇಶಿಸಿ ಗೊಂದಲಕ್ಕೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next