Advertisement

ಯುಪಿಯಲ್ಲಿ ಹೀನಾಯ ಸೋಲು: ಮಾಧ್ಯಮಗಳ ಮುಂದೆ ಬರಲ್ಲ ಎಂದ ಮಾಯಾವತಿ

11:03 PM Mar 12, 2022 | Team Udayavani |

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಇನ್ನು ಮುಂದೆ ಮಾಧ್ಯಮಗಳ ಮುಂದೆ ತಾವು ಬರುವುದಿಲ್ಲ ಎಂದು ಹೇಳಿದ್ದಾರೆ.

Advertisement

“ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳು ಅವರ ಮೇಲಧಿಕಾರಿಗಳ ಸೂಚನೆಯಂತೆ ಜಾತಿ ಮತ್ತು ದ್ವೇಷದ ಧೋರಣೆ ಅನುಸರಿಸಿ ಅಂಬೇಡ್ಕರ್‌ವಾದಿಯಾಗಿರುವ ಬಿಎಸ್‌ಪಿಗೆ ಹಾನಿ ಮಾಡಿವೆ.

ನಮ್ಮ ಪಕ್ಷವನ್ನು ಬಿಜೆಪಿ “ಬಿ ಟೀಮ್‌’ ಎನ್ನುವ ಮೂಲಕ ನಮಗೆ ಬರಬೇಕಿದ್ದ ಮತಗಳು ಸಮಾಜವಾದಿ ಪಕ್ಷಕ್ಕೆ ಹೋಗುವಂತೆ ಮಾಡಿವೆ.

ಹಾಗಾಗಿ ಇನ್ನು ಮುಂದೆ ಬಿಎಸ್‌ಪಿಯ ಯಾವ ನಾಯಕರೂ ಯಾವುದೇ ಮಾಧ್ಯಮಗಳ ಸಂವಾದಗಳಲ್ಲಿ ಭಾಗವಹಿಸುವುದಿಲ್ಲ” ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next