Advertisement

ದಲಿತ ದೌರ್ಜನ್ಯ ಧ್ವನಿಗೆ ಅವಕಾಶವಿಲ್ಲ: ಮಾಯಾವತಿ ರಾಜೀನಾಮೆ ಬೆದರಿಕೆ

01:19 PM Jul 18, 2017 | Team Udayavani |

ಹೊಸದಿಲ್ಲಿ : ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದಘಟನೆ ಮಂಗಳವಾರ ನಡೆದಿದೆ. 

Advertisement

ರಾಜ್ಯಸಭೆಯಲ್ಲಿ ಸಹರಣ್‌ಪುರ್‌ನಲ್ಲಿ ದಲಿತರ ಮೇಲಾದ ದೌರ್ಜನ್ಯದ ಕುರಿತು ಮಾತನಾಡಲು ಮುಂದಾದಾಗಸಭಾಧ್ಯಕ್ಷ ಪಿ.ಜೆ.ಕುರಿಯನ್‌ ಅವರು ನಿರ್ಬಂಧಿಸಿದ ಕಾರಣಕ್ಕೆ ಕೆಂಡಾಮಂಡಲರಾದ ಮಾಯಾವತಿ ಇಂದು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಸದನದಿಂದ ಹೊರಬಂದ ಮಾಯಾವತಿ ಮಾಧ್ಯಮಗಳೊಂದಿಗೆ ಮಾತನಾಡಿ ನಾನು ದಲಿತರ ಪರ ಧ್ವನಿಯಾಗಿ ಇಲ್ಲಿಗೆ ಬಂದಿದ್ದೇನೆ. ಆದರೆ ನನಗೆ ಆ ಬಗ್ಗೆ ಮಾತನಾಡಲು ಅವಕಾಶವನ್ನೇ ನೀಡುವುದಿಲ್ಲ. ನಾನೇಕೆ ಇಲ್ಲಿ ಮುಂದುವರಿಯಬೇಕು ಎಂದು ಪ್ರಶ್ನಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next