Advertisement

ಶ್ರೀರಾಮ ಮಂದಿರ ರಾಷ್ಟ್ರ ಮಂದಿರವಾಗಲಿ: ಮೂರ್ತಿಜಿ

06:53 PM Jan 12, 2021 | Team Udayavani |

ಸೈದಾಪುರ: ದೇಶದ ಪ್ರತಿಯೊಬ್ಬರ ಮನೆ ಮನ ಸ್ಪಂದನೆಯಿಂದ ನಿಧಿ ಸಂಗ್ರಹ ಮಾಡುವುದರ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವು ರಾಷ್ಟ್ರ ಮಂದಿರವಾಗಿ ನಿರ್ಮಾಣವಾಗಬೇಕು ಎಂದು ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಪ್ರಮುಖ ಮೂರ್ತಿಜಿ ಹೇಳಿದರು.

Advertisement

ಪಟ್ಟಣದ ಎಕ್ಸ್‌ಪರ್ಟ್‌ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಹೋಬಳಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಮ ಮಂದಿರ ನಿರ್ಮಾಣಕ್ಕಾಗಿ 492 ವರ್ಷಗಳ ಹೋರಾಟ ಮತ್ತು ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ನೀಡಿದ್ದಾರೆ. ಹಲವು ವರ್ಷಗಳ ಕಾನೂನಿನ ಹೋರಾಟದ ಮೂಲಕ ಇಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಈಗಾಗಲೇ ದೇಶಾದ್ಯಂತ ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಜ.15ರಿಂದ ಫೆ.5ರ ವರೆಗೆ ಅಭಿಯಾನ ಶುರುವಾಗಿದೆ.

ಸೈದಾಪುರ ಹೋಬಳ್ಳಿಯಲ್ಲಿ ಜ.23ರಂದು ಪ್ರತಿ ಗ್ರಾಮಗಳಲ್ಲಿ ಏಕಕಾಲದಲ್ಲಿ ಈ ಅಭಿಯಾಯನಕ್ಕೆ ಚಾಲನೆ ನೀಡುವುದರ ಮೂಲಕ ದೇಣಿಗೆ ಸಂಗ್ರಹ ಮಾಡಲಾಗುವುದು ಎಂದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ್‌, ಪ್ರಕಾಶಗೌಡ ಸೈದಾಪುರ, ನಿಧಿ  ಸಮರ್ಪಣಾ ಅಭಿಯಾನದ ತಾಲೂಕು ಪ್ರಮುಖ ಮಲರೆಡ್ಡಿ, ಹೋಬಳಿ ಪ್ರಮುಖ ಭೀಮಣ್ಣ ಮಡಿವಾಳಕರ್‌, ರವಿ ಪಾಟೀಲ್‌, ರಾಜು ದೊರೆ, ಬಸು ನಾಯಕ್‌, ಪ್ರೇಮನಾಥ ಕದಂ, ರಾಘವೇಂದ್ರ ಕಲಾಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next