Advertisement

ಮೇ 23: ದುಬಾೖಯಿಂದ ಇನ್ನೊಂದು ವಿಮಾನ ನಿರೀಕ್ಷೆ

06:42 AM May 21, 2020 | mahesh |

ಮಂಗಳೂರು: ವಿದೇಶದಲ್ಲಿರುವ ಕರಾವಳಿ ಕರ್ನಾಟಕದ ಜನರನ್ನು ಕರೆತರುವ ನಿಟ್ಟಿನಲ್ಲಿ ಈಗಾಗಲೇ ದುಬಾೖನಿಂದ ಮಂಗಳೂರಿಗೆ 2 ವಿಮಾನಗಳು ಬಂದಿದ್ದು, 3ನೇ ವಿಮಾನ ಮೇ 23ರಂದು ಬರುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಟ್ವೀಟ್‌ ಮಾಡಿದ್ದಾರೆ.

Advertisement

ಮೇ 22 ದೋಹಾದಿಂದ ಹಾಗೂ ಮೇ 23ರಂದು ದುಬಾೖಯಿನಿಂದ ಬೆಂಗಳೂರಿಗೆ ವಿಷೇಷ ವಿಮಾನಗಳು ಬರಲಿದ್ದು, ಈ ಎರಡೂ ವಿಮಾನಗಳು ಬಳಿಕ ಬೆಂಗಳೂರಿಂದ ಮಂಗಳೂರಿಗೆ ಸಂಚರಿಸಲಿವೆ. ಆದರೆ ಇದರಲ್ಲಿ ಮಂಗಳೂರಿಗೆ ಬರುವ ಪ್ರಯಾಣಿಕರನ್ನು ಒಯ್ಯುವ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ ಎಂದು ವಿಮಾನ ಯಾನ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next