Advertisement

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

11:24 PM Apr 30, 2024 | Team Udayavani |

ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ಥಾನಗಳೆರಡೂ ಒಂದೇ ದಿನ ಸ್ವತಂತ್ರವಾದವು. ಆದರೆ ಇಂದು ಭಾರತ ಸೂಪರ್‌ ರಾಷ್ಟ್ರದ ಕನಸು ಕಾಣು ತ್ತಿದ್ದರೆ, ನಾವು ದಿವಾಳಿಯಾಗುವುದನ್ನು ತಪ್ಪಿಸಲು ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ಥಾನದ ಧರ್ಮ ಗುರು, ಜೆಯುಐ-ಎಫ್ ಸಂಸದ ಮೌಲಾನಾ ಫ‌ಜ್ಲುರ್‌ ರೆಹಮಾನ್‌ ಹೇಳಿದ್ದಾರೆ.

Advertisement

ಪಾಕಿಸ್ಥಾನದ ನ್ಯಾಶನಲ್‌ ಅಸೆಂಬ್ಲಿಯಲ್ಲಿ ಮಾತನಾಡುತ್ತಾ, ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐಗೆ ರ್ಯಾಲಿ ನಡೆಸುವ ಹಕ್ಕಿದೆ. ಅದು ದೊಡ್ಡ ಪಕ್ಷವಾಗಿದ್ದರೂ  ವಿಪಕ್ಷದ ಸ್ಥಾನದಲ್ಲಿದೆ ಎಂದು ಹೇಳಿದರು. ಈ ವೇಳೆ ಅವರು ಭಾರತ-ಪಾಕಿಸ್ಥಾನದ ನಡುವಿನ ಹೋಲಿಕೆಯನ್ನು ಮಾಡಿ, ಸರಕಾರವನ್ನು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next