Advertisement

ಕೃಷ್ಣ ಜನ್ಮಸ್ಥಾನ ಕೇಸು: ಅ.15ಕ್ಕೆ ತೀರ್ಮಾನ

12:20 AM Sep 29, 2020 | mahesh |

ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಸ್ಥಾನವನ್ನು ಮುಕ್ತಿಗೊಳಿಸುವುದರ ಬಗ್ಗೆ ನ್ಯಾಯಾಲಯದಲ್ಲಿ ಹೂಡಲಾಗಿರುವ ಖಟ್ಲೆಯಲ್ಲಿ ಪಾಲುದಾರಿಕೆ ವಹಿಸಬೇಕೇ ಬೇಡವೇ ಎಂಬ ಬಗ್ಗೆ ಅ.15ರಂದು ನಿರ್ಧರಿಸಲಾಗುತ್ತದೆ.

Advertisement

ಸ್ವಾಮೀಜಿಗಳ ಸಂಘಟನೆ ಆ ದಿನ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ. ಅಖೀಲ ಭಾರತ ಅಖಾರಾ ಪರಿಷತ್‌ನ ಅಧ್ಯಕ್ಷ ನರೇಂದ್ರ ಗಿರಿ ಮಾತನಾಡಿ, ಸಂಘಟನೆಯ ಪದಾಧಿ ಕಾರಿಗಳು ಮಥುರಾಕ್ಕೆ ಭೇಟಿ ಅಲ್ಲಿನ ಸ್ಥಿತಿ ಪರಿಶೀಲಿಸಲಿದ್ದಾರೆ ಎಂದರು.

ಸೆ. 26ರಂದು ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಎಂಬುವರು ಮಥುರಾದ ಸ್ಥಳೀಯ ಕೋರ್ಟ್‌ನಲ್ಲಿ ದಾವೆ ಹೂಡಿ ಕಟ್ರಾ ಕೇಶವ ದೇವ ದೇಗುಲದ ಆವರಣದಲ್ಲಿರುವ ಮಸೀದಿ ತೆರವುಗೊಳಿಸಬೇಕು ಎಂದು ಕೇಳಿದ್ದರು. ಅಖೀಲ ಭಾರ ತೀಯ ತೀರ್ಥ ಪುರೋಹಿತ ಮಹಾ ಸಭಾದ ಅಧ್ಯಕ್ಷ ಮಹೇಶ್‌ ಪಾಠಕ್‌ ಅವರು ” ಮಥುರಾದಲ್ಲಿ ಮಸೀದಿ -ದೇಗುಲ ಎಂಬ ವಿವಾದವೇ ಇಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next