Advertisement

ಮಾಸ್ತಿ ಪುರಸ್ಕಾರ: ಗಜಾನನ ಶರ್ಮ, ಮಲ್ಲಿಕಾರ್ಜುನ, ದಾದಾಪೀರ್‌ ಜೈಮನ್‌ ಆಯ್ಕೆ

11:04 PM Sep 28, 2022 | Team Udayavani |

ಬೆಂಗಳೂರು: ಮಾಸ್ತಿ ಟ್ರಸ್ಟ್‌ ನೀಡುವ 2022ನೇ ಸಾಲಿನ ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಗಜಾನನ ಶರ್ಮ ಅವರ “ಚೆನ್ನ ಭೈರಾದೇವಿ’ ಕೃತಿ ಆಯ್ಕೆ ಆಗಿದೆ. ಪ್ರಶಸ್ತಿ 25 ಸಾವಿರ ರೂ. ಹೊಂದಿದೆ. ಕೃತಿಯನ್ನು ಪ್ರಕಟಿಸಿರುವ ಅಂಕಿತ ಪುಸ್ತಕ ಪ್ರಕಾಶನ 10 ಸಾ. ರೂ. ನಗದು ಪುರಸ್ಕಾರಕ್ಕೆ ಪಾತ್ರವಾಗಿದೆ.

Advertisement

ಮಾಸ್ತಿ ಕಥಾ ಪುರಸ್ಕಾರಕ್ಕೆ ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರ “ಹಾವಳಿ’ ಕಾದಂಬರಿ ಆಯ್ಕೆಯಾಗಿದ್ದು, ಪ್ರಶಸ್ತಿ 25 ಸಾ. ರೂ. ಪುರಸ್ಕಾರ ಒಳಗೊಂಡಿದೆ. ಕೃತಿಯನ್ನು ಪ್ರಕಟಿಸಿರುವ ಧಾರವಾಡ ಮನೋಹರ ಗ್ರಂಥಮಾಲಾ ಪ್ರಕಾಶನವು 10 ಸಾವಿರ ರೂ. ನಗದು ಬಹುಮಾನಕ್ಕೆ ಭಾಜನವಾಗಿದೆ.

ಯುವ ಲೇಖಕ ದಾದಾಪೀರ್‌ ಜೈಮನ್‌ ಅವರ “ನೀಲ ಕುರಿಂಜಿ’ ಕೃತಿ ಕೂಡ ಮಾಸ್ತಿ ಕಥಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, 25 ಸಾ. ರೂ. ಬಹುಮಾನಕ್ಕೆ ಪಾತ್ರ ರಾಗಿದ್ದಾರೆ. ಕೃತಿಯನ್ನು ಪ್ರಕಟಿಸಿರುವ ವೈಷ್ಣವಿ ಪ್ರಕಾಶನ 10 ಸಾ.ರೂ.ನಗದು ಪ್ರಶಸ್ತಿಗೆ ಅರ್ಹವಾಗಿದೆ. ಸ್ಪರ್ಧೆಗೆ 25 ಕೃತಿಗಳು ಬಂದಿದ್ದವು. ಈಶ್ವರಚಂದ್ರ, ಎಂ.ಎಸ್‌. ಆಶಾದೇವಿ, ವಿಜಯಶಂಕರ, ಎಚ್‌. ದಂಡಪ್ಪ, ಚ.ಹ.ರಘುನಾಥ್‌, ಚಿಂತಾಮಣಿ ಕೊಡ್ಲೆಕೆರೆ ತೀರ್ಪುಗಾರರಾಗಿದ್ದರು. ಮಾಸ್ತಿ ಪುರಸ್ಕಾರ ಸಮಾರಂಭ ವನ್ನು ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮಾಸ್ತಿ ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next