Advertisement

ಭಾರೀ ವಾಹನ ಸಂಚಾರ ನಿಷೇಧ: ಸಚಿವ ಡಿಕೆಶಿ 

06:15 AM Aug 20, 2018 | Team Udayavani |

ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳ ಕೆಳಭಾಗದಲ್ಲಿರುವ ಸೇತುವೆಗಳ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡದಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಜಲಾಶಯಗಳು ಭರ್ತಿಯಾಗಿರುವುದರಿಂದ ಅವುಗಳ ಕೆಳಭಾಗದಲ್ಲಿರುವ ಸೇತುವೆಗಳ ಮೇಲೆ ಅಧಿಕ ಭಾರದ ವಸ್ತುಗಳನ್ನು ಹೇರಿಕೊಂಡು ಹೋಗುವ ವಾಹನಗಳಿಂದ ಸೇತುವೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಭಾರೀ ವಾಹನಗಳನ್ನು ನಿಷೇಧಿಸಲು ಸೂಚಿಸಲಾಗಿದೆ ಎಂದರು.

ಮಳೆ ಮತ್ತು ಭಾರೀ ಪ್ರಮಾಣದ ನೀರಿನಿಂದಾಗಿ ಯಾವುದೇ ಜಲಾಶಯಗಳು ಬಿರುಕು ಬಿಟ್ಟಿಲ್ಲ. ಜನರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು.

ಸರ್ಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ನೆರೆ ಸಂತ್ರಸ್ತರಿಗೆ ಸಾರ್ವಜನಿಕರಿಂದಲೂ ಸಹಾಯ ಹಸ್ತ ಪಡೆದು ಸರ್ಕಾರ ನೆರವಿಗೆ ಧಾವಿಸುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next