Advertisement

ಅಂತರಿಕ್ಷದ ಭಯೋತ್ಪಾದಕ!

07:47 PM Aug 28, 2019 | mahesh |

ಡೈನೋಸಾರ್‌ಗಳು ಭೂಮಿ ಮೇಲಿಂದ ಹೇಗೆ ನಶಿಸಿದವು ಹೇಳಿ. ಅದಕ್ಕೆ ಖಚಿತ ಕಾರಣ ಈವರೆಗೆ ಪತ್ತೆ ಹಚ್ಚಿಲ್ಲ. ಈ ಬಗ್ಗೆ ಅನೇಕ ಸಿದ್ಧಾಂತಗಳಿವೆ. ಅವುಗಳಲ್ಲಿ ಜನಪ್ರಿಯವಾದ ಸಿದ್ಧಾಂತ ಎಂದರೆ ಕ್ಷುದ್ರಗ್ರಹವೊಂದು ಭೂಮಿಗೆ ಬಡಿದು ಅದರಿಂದ ಸೃಷ್ಟಿಯಾದ ಪ್ರಳಯಕ್ಕೆ ಡೈನೋಸಾರ್‌ಗಳು ಬಲಿಯಾದವು ಎನ್ನುವುದು. ಈ ವಿಚಾರ ಈಗ ಯಾಕೆ ಬಂತೆಂದರೆ ಜಗತ್ತಿನ ಅತಿ ದೊಡ್ಡ ಕಟ್ಟಡ ಎಂಬ ಖ್ಯಾತಿಯ ಭುರ್ಜ್‌ ಖಲೀಫಾಗಿಂತ ಒಂಚೂರು ಕಡಿಮೆ ಎತ್ತರದ ಆಕಾಶಕಾಯವೊಂದು ಭೂಮಿಯತ್ತ ಬರುತ್ತಿದೆ. ಆದರೆ ಭಯ ಬೇಡ ಅದೇನು ಭೂಮಿಗೆ ಅಪ್ಪಳಿಸುವುದಿಲ್ಲ. ಭೂಮಿಯ ಸಮೀಪದಲ್ಲಿ ಹಾದು ಹೋಗುತ್ತದಷ್ಟೆ. ಈ ಕ್ಷುದ್ರಗ್ರಹಕ್ಕೆ “2000QW7′ ಎಂದು ನಾಮಕರಣ ಮಾಡಲಾಗಿದೆ.

Advertisement

ಎಷ್ಟು ಹತ್ತಿರ ಬರುತ್ತಿದೆ?
ಭೂಮಿಯ ಹತ್ತಿರ ಬರಲಿದೆ ಎಂದಾಕ್ಷಣ ನೂರಿನ್ನೂರು ಕಿ.ಮೀ ದೂರ ಎಂದುಕೊಳ್ಳಬೇಡಿ. 30 ಲಕ್ಷ ಮೈಲಿಗಳಷ್ಟು ದೂರದಲ್ಲೇ ಅದು ಹಾದು ಹೋಗಲಿದೆ. ಅಯ್ಯೋ ಲಕ್ಷ ಮೈಲಿಯಷ್ಟು ದೂರದವರೆಗೆ ಬಂದು ಟಾಟಾ ಬೈಬೈ ಹೇಳುವ ಕಲ್ಲೊಂದಕ್ಕೆ ಯಾಕಿಷ್ಟು ಆತಂಕ ಎಂದುಕೊಳ್ಳಬೇಡಿ. ಎಕೆಂದರೆ ಸುಮಾರು 40 ಲಕ್ಷ ಮೈಲಿಗಳ ಅಂತರದ ಒಳಗೆ ಹಾದು ಹೋಗುವ ಯಾವುದೇ ಆಕಾಶಕಾಯವನ್ನು ಬಾಹ್ಯಾಕಾಶ ಸಂಸ್ಥೆಗಳು “ಅಪಾಯಕಾರಿ’ ಎಂದು ಪರಿಗಣಿಸುತ್ತವೆ. ಈ ಕ್ಷುದ್ರಗ್ರಹ ಆಪಾಯಕಾರಿ ವಲಯದೊಳಗೆ ಬಂದರೂ, ಭೂಮಿಗೆ ಗಂಡಾಂತರ ತರುವ ಆಕಾಶಕಾಯಗಳ ಪಟ್ಟಿ ಉದ್ದವಿದೆ. ಆದರಲ್ಲಿ 2000ಕಿಗ7 ಇಲ್ಲ!

ಇದೇ ಮೊದಲಲ್ಲ
ಗಂಟೆಗೆ 23,100 ಕಿ.ಮೀ ವೇಗದಲ್ಲಿ ಇದು ಚಲಿಸುತ್ತಿದೆ. ಈ ಹಿಂದೆಯೂ 2000ಕಿಗ7 ಕ್ಷುದ್ರಗ್ರಹ ಭೂಮಿಯ ಸಮೀಪದಲ್ಲಿ ಹಾದು ಹೋಗಿತ್ತು. ಅದು ಸೆಪ್ಟೆಂಬರ್‌ 1, 2000 ನೇ ಇಸವಿಯಲ್ಲಿ. ಈ ಬಾರಿಯೂ ಸೆಪ್ಟೆಂಬರ್‌ 1ರಂದೇ ಭೂಮಿಯನ್ನು ಹಾದು ಹೋಗಲಿದೆ. ಅದರ ಮುಂದಿನ ಭೇಟಿ ಅಕ್ಟೋಬರ್‌ 19, 2038ನೇ ಇಸವಿಗೆ.

ಕ್ಷುದ್ರಗ್ರಹ ಮತ್ತು ಉಲ್ಕೆಗಳು
ಕ್ಷುದ್ರಗ್ರಹ ಎಂದರೆ, ಗ್ರಹಗಳಂತೆಯೇ ಸೂರ್ಯನನ್ನು ಸುತ್ತು ಹಾಕುವ ಕಲ್ಲಿನ ತುಣುಕು. ಯಾವ ರೀತಿ ಸೌರಮಂಡಲದ ಪ್ರತಿಯೊಂದು ಗ್ರಹಗಳಿಗೆ ಅದರದ್ದೇ ಆದ ಪಧ ಇದೆಯೋ ಅದೇ ರೀತಿ ಕ್ಷುದ್ರಗ್ರಹಗಳಿಗೂ ಅದರದ್ದೇ ಆದ ಪಥ ಇರುತ್ತದೆ. ಕ್ಷುದ್ರಗ್ರಹಗಳು, ಸಾಮಾನ್ಯವಾಗಿ ಮಂಗಳ ಮತ್ತು ಗುರು ಗ್ರಹದ ಪಥದಲ್ಲಿ ಇವು ಕಂಡುಬರುತ್ತವೆ. ಎರಡು ಕ್ಷುದ್ರಗ್ರಹಗಳು ಒಂದಕ್ಕೊಂದು ಢಿಕ್ಕಿ ಹೊಡೆದಾಗ ಸಿಡಿಯುವ ಚೂರುಗಳೇ ಉಲ್ಕೆಗಳು. ಪ್ರತಿನಿತ್ಯ ಚಿಕ್ಕ ಗಾತ್ರದ ಉಲ್ಕೆಗಳು ಭೂಮಿಗೆ ಬೀಳುತ್ತಲೇ ಇರುತ್ತವೆ. ಆದರೆ, ಇವು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಮುನ್ನವೇ ಉರಿದು ನಾಶವಾಗುತ್ತವೆ. ಕ್ಷುದ್ರಗ್ರಹಗಳ ಉಗಮ ಸೌರಮಂಡಲದ ಉಗಮದ ಸಮಯದಲ್ಲೇ ಆಗಿತ್ತು.

ಹರ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next