Advertisement

ಅಭಿಯಂತರರಿಂದ ಸಾಮೂಹಿಕ ರಜೆ!

02:24 PM Jun 28, 2019 | Team Udayavani |

ರೋಣ: ತಾಲೂಕಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ಗಳು, ಕೆಲ ಸಿಬ್ಬಂದಿ ವೈಯಕ್ತಿಕ ಕಾರಣ ನೀಡಿ ಸಾಮೂಹಿಕವಾಗಿ ಜೂ.28ರಿಂದ ಜುಲೈ 12ರವರೆಗೆ ರಜೆ ಕೋರಿದ್ದಾರೆ.

Advertisement

ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ಗಳಾದ ಪಿ.ಎಚ್. ಕೋತಬಾಳ, ಆರ್‌.ಡಿ. ಯಲಿಗಾರ, ಎಲ್.ಎ.ಬ್ಯಾಳಿ, ಕಿರಿಯ ಎಂಜಿನಿಯರ್‌ಗಳಾದ ಎಂ.ಬಿ. ಮುದಿಬಸನಗೌಡ್ರ, ಗುರುನಾಥ ಹಾಗೂ ಅನೇಕ ಸಿಬ್ಬಂದಿ ಜೂ.28ರಿಂದ ಜು.12ರವರೆಗೆ ಸಾಮೂಹಿಕವಾಗಿ ಕಚೇರಿ ಕೆಲಸಕ್ಕೆ ರಜೆ ಕೋರಿ ಮನವಿ ಸಲ್ಲಿಸಿದ್ದಾರೆ.

ಕಚೇರಿಯ ಎಲ್ಲ ಎಂಜಿನಿಯರ್‌ಗಳು ಒಮ್ಮೆಲೇ ಏಕಕಾಲದಲ್ಲಿ ರಜೆ ಹಾಕಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಸಹಾಯಕ ಮುಖ್ಯ ಎಂಜಿನಿಯರ್‌ ಕಿಶೋರ ಹದ್ಲಿಯವರ ವರ್ತನೆ ಎಂಜಿನಿಯರ್‌ಗಳಿಗೆ ಬೇಸರ ತರಿಸಿದೆ. ಹೀಗಾಗಿ ಎಲ್ಲ ಎಂಜಿನಿಯರ್‌ಗಳು ಸಾಮೂಹಿಕವಾಗಿ ರಜೆಗೆ ಮನವಿ ಸಲ್ಲಿಸಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next