Advertisement

ಮಲಾಡ್‌ ಕುರಾರ್‌ ವಿಲೇಜ್‌ನಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

04:03 PM Sep 12, 2018 | |

ಮುಂಬಯಿ: ಕಳೆದ ಒಂಬತ್ತು ವರ್ಷಗಳಿಂದ ಸತತವಾಗಿ ಈ ಸ್ಥಳದಲ್ಲಿ ಸಮಿತಿಯವರ ಹಾಗೂ ಭಕ್ತಾಭಿಮಾನಿಗಳ ಸಹಕಾರದಿಂದ ವರಮಹಾಲಕ್ಷ್ಮೀ ಪೂಜೆ ನಡೆಸುತ್ತಿದ್ದು, ಇದರೊಂದಿಗೆ ಪರಿಸರದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಮಹಾಲಕ್ಷ್ಮೀಯ ಸೇವೆಯೊಂದಿಗೆ ಈ ಸಮಿತಿಯ ಮೂಲಕ ಸರಸ್ವತಿಯ ಸೇವೆಯನ್ನು ಮಾಡುತ್ತಿರುವುದು ಅಭಿಮಾನ ಎನಿಸುತ್ತಿದೆ. ಇದು ನಮ್ಮ ಸಮಿತಿಯ ಎÇÉಾ ಸದಸ್ಯರ ಹಾಗೂ ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಾಧ್ಯವಾಗುತ್ತಿದೆ ಎಂದು ಮಲಾಡ್‌  ಶ್ರೀ  ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ ಶೆಟ್ಟಿ ಅವರು ನುಡಿದರು.

Advertisement

ಸೆ. 9ರಂದು  ಮಾಲಾಡ್‌ ಪೂರ್ವದ  ಕುರಾರ್‌ ವಿಲೇಜ್‌ನ ಆನಂದವಾಡಿ ಜೀಜಾಮಾತಾ ಶಾಲೆಯ ಆವರಣದಲ್ಲಿ ಮಲಾಡ್‌  ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಆಶ್ರಯದಲ್ಲಿ 9ನೇ ವರ್ಷದ ಶ್ರೀ ವರಮಹಾಲಕ್ಷಿ¾à ಪೂಜೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮುಂದಿನ ವರ್ಷ ದಶಮಾನೋತ್ಸವವನ್ನು ಆಚರಿಸುತ್ತಿರುವ ನಮಗೂ ಪೂರ್ವ ಸಿದ್ಧತೆ ಮಾಡಬೇಕಾಗಿದ್ದು ನಿಮ್ಮೆಲ್ಲರ ಸಹಾಯ ಬೇಕಾಗಿದೆ. ನಮ್ಮ ಸಮಿತಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೇಣಿಗೆಗಾಗಿ ಯಾರ ಬಳಿಗೂ ಹೋಗದೆ ಸಮಿತಿಯವರೇ ಎಲ್ಲವನ್ನು ನೀಡುತ್ತಿದ್ದು, ಇಲ್ಲಿ ಮಹಾಲಕ್ಷ್ಮೀಯ ಅನುಗ್ರಹವಿದೆ ಎಂದರು.

ಮೀರಾರೋಡ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾದ‌ìನ ಭಟ್‌ ಅವರ ಪೌರೋಹಿತ್ಯದಲ್ಲಿ ಮುಂಬಯಿಯ ಪತ್ರಕರ್ತ, ಬಿ. ದಿನೇಶ್‌ ಕುಲಾಲ್‌ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೊದಲಿಗೆ  ಸದಾನಂದ ಕೋಟ್ಯಾನ್‌ ಮತ್ತು ಸಮಿತಿಯ ಸದಸ್ಯರಿಂದ ಹಾಗೂ ಶೇಖರ ಸಸಿಹಿತ್ಲು ಮತ್ತು ಬಳಗದವರಿಂದ ಭಜನೆ, ನಂತರ ಮಲಾಡ್‌ ಪರಿಸರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ವೈಭವ ನಡೆಯಿತು.

ಅತಿಥಿಗಳಾಗಿ ವೇದಿಕೆಯಲ್ಲಿ ಕುಲಾಲ ಸಂಘ ಚರ್ಚ್‌ಗೇಟ್‌ – ದಹಿಸರ್‌ ಸ್ಥಳೀಯ ಸಮಿ ತಿಯ ಕಾರ್ಯಾಧ್ಯಕ್ಷ ಗಣೇಶ್‌ ಸಾಲ್ಯಾನ್‌,  ಚಾಮುಂಡೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಕುಮಾರ್‌ ಗೌಡ, ಅಭ್ಯುದಯ ಬ್ಯಾಂಕಿನ ಆಡಳಿತ ನಿರ್ದೇಶಕ ಪ್ರೇಮನಾಥ ಸಾಲ್ಯಾನ್‌, ಸಮಿತಿಯ ಗೌರವ ಕಾರ್ಯದರ್ಶಿ ಗಣೇಶ್‌ ಎಲ್‌. ಕುಂದರ್‌, ಕೋಶಾಧಿಕಾರಿ ಜಗನ್ನಾಥ ಎಚ್‌.  ಮೆಂಡನ್‌, ಸಂತೋಷ್‌ ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು ಅತಿಥಿಗಳನ್ನು ಸತ್ಕರಿಸಿದರು. ರತ್ನಾ ಡಿ. ಕುಲಾಲ್‌ ಅವರು ಅತಿಥಿಗಳನ್ನು ಪರಿಚಯಿಸಿದರು.

ಸಮಿತಿಯ ವತಿಯಿಂದ ಮಹಾನಗರದಲ್ಲಿ ಸಾಧನೆಗೈದ ಬೃಹನ್ಮುಂಬಯಿ ಕಸ್ಟಮ್‌ ಬ್ರೋಕರ್ ಅಸೋಸಿಯೇಶನ್‌ ಅಧ್ಯಕ್ಷ  ಕರುಣಾಕರ ಶೆಟ್ಟಿ ಇವರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಅನಾರೋಗ್ಯ ಪೀಡಿತ ಸ್ಥಳೀಯರಿಗೆ ಸಹಾಯ ಹಸ್ತವನ್ನು ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈಭವ ಕಾರ್ಯಕ್ರಮಗಳನ್ನು ಕುಮರೇಶ್‌ ಆಚಾರ್ಯ, ಸೌಮ್ಯಾ ಮೆಂಡನ್‌ ಮತ್ತು ಯೋಗೇಶ್ವರಿ ಗೌಡ ನಿರ್ವಹಿಸಿದರು. ಸಭಾ ಕಾರ್ಯಕ್ರಮಗಳನ್ನು ಬಿ. ದಿನೇಶ್‌ ಕುಲಾಲ್‌ ಅವರು ನಿರ್ವಹಿಸಿದರು.

Advertisement

ಈ ಸಂದರ್ಭದಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತಿರ್ಣರಾದ ರಾಜೇಶ್‌ ಮೂಲ್ಯ ಮತ್ತು ಅವರ ಹೆತ್ತವರನ್ನು ಸಮ್ಮಾನಿಸಲಾಯಿತು. 

ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ದಿನೇಶ್‌ ಕಾಮತ್‌ ಅವರ ಸಹಭಾಗಿತ್ವದಲ್ಲಿ ಅನ್ನಸಂತರ್ಪಣೆ ನಡೆಯಿತು. 
ಕಾರ್ಯಕ್ರಮಗಳ ಯಶಸ್ಸಿಗೆ ಸಮಿತಿಯ ಇತರ ಸದಸ್ಯರುಗಳಾದ ಸತೀಶ್‌ ಭಟ್‌,  ಸಂತೋಷ್‌ ಪೂಜಾರಿ, ದೇವು ಬಿ. ಕೋಟ್ಯಾನ್‌, ಈಶ್ವರ ಕುಲಾಲ್‌,  ಶೈಲೇಶ್‌ ಪೂಜಾರಿ, ಮಹಾಬಲ ಪೂಜಾರಿ, ಉದಯ ಬಿ. ಸಾಲ್ಯಾನ್‌, ಮಹೇಶ್‌ ಗೌಡ, ಮೃತ್ಯುಂಜಯ ಪಲ್ಲಿ, ಶೇಖರ ಪೂಜಾರಿ, ಕುಮಾರೇಶ್‌ ಆಚಾರ್ಯ, ಚಂದ್ರಶೇಖರ ಶೆಟ್ಟಿ, ನಿತ್ಯಾನಂದ ಕೋಟ್ಯಾನ್‌, ಸುಂದರ ಪೂಜಾರಿ, ದಿನೇಶ್‌ ಕುಂಬ್ಳೆ, ದಿನೇಶ್‌ ಪೂಜಾರಿ, ಸೀತಾರಾಮ್‌ ಅಮೀನ್‌, ಸಿದ್ಧರಾಮ ಗೌಡ, ಸೋಮನಾಥ ವಾಗ್ಲೆ,  ಅಂಡಾರ ಕೃಷ್ಣ ಪ್ರಭು, ರವಿ ಮೂಲ್ಯ, ಜಯರಾಮ ಪಾಟ್ಕರ್‌,  ಸನತ್‌ ಪೂಜಾರಿ, ಪ್ರತೀಕ್‌  ಶೆಟ್ಟಿ, ಸಲಹೆಗಾರರಾದ  ಪರಮಾನಂದ ಜೆ. ಭಟ್‌, ರವಿ ಸ್ವಾಮೀಜಿ, ಶ್ರೀನಿವಾಸ ಸಾಫಲ್ಯ,  ಹರೀಶ್‌ ಶೆಟ್ಟಿ, ಪ್ರೇಮನಾಥ ಸಾಲ್ಯಾನ್‌ ಮತ್ತಿತರರು ಸಹಕರಿಸಿದರು. 

ತುಳುನಾಡ ಮಣ್ಣಲ್ಲಿ ಹುಟ್ಟಿ ಬೆಳೆದು ಜೀವನಕ್ಕಾಗಿ ಮುಂಬಯಿಗೆ ಆಗಮಿಸಿದ ನಾವು ಇಲ್ಲಿ  ನಮ್ಮ ದೇವರ ಸೇವೆ ಮಾಡುತ್ತಾ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಿರುವೆವು. ವರಮಹಾಲಕ್ಷ್ಮೀ ಪೂಜೆಯು ಮಹಿಳೆಯಿಂದ ಪ್ರಾರಂಭಗೊಂಡಿದೆ.
– ರಮೇಶ್‌ ಗುರುಸ್ವಾಮಿ,  ಸಂಸ್ಥಾಪಕರು, ವರ್ಲಿ ಅಪ್ಪಾಜಿ ಬೀಡು ಫೌಂಡೇಶನ್‌

ಮಲಾಡ್‌ ಪರಿಸರದ ತುಳು ಕನ್ನಡಿಗರ ಮಾತ್ರವಲ್ಲ ಇತರ ಸಮುದಾಯದವರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲು ಕಳೆದ ಒಂಬತ್ತು ವರ್ಷಗಳಿಂದ ವರಮಹಾ ಲಕ್ಷ್ಮೀ  ಪೂಜೆಯ ಮೂಲಕ ಕಾರ್ಯನಿರತವಾಗಿರುವ ಈ ಸಮಿತಿಯ ಕಾರ್ಯ ಶ್ಲಾಘನೀಯ. ಇದು ಮುಖ್ಯವಾಗಿ ಮಹಿಳೆಯರ ಕಷ್ಟ ಗಳನ್ನು ದೂರ ಮಾಡುವ ಪೂಜೆ. ಭಕ್ತಿಯಿಂದ ಈ ಪೂಜೆ ಮಾಡಿದಲ್ಲಿ ಲಕ್ಷಿ¾ ಮನೆಯಲ್ಲಿ ಬಂದು ನೆಲೆಸಿಯಾಳು.
– ರಘುರಾಮ ಚಂದನ್‌, ಕಾರ್ಯಾಧ್ಯಕ್ಷರು, ಮೊಗವೀರ ಮಹಾಜನ ಸಂಘ ಬಗ್ವಾಡಿ ಮೀರಾರೋಡ್‌ ಸ್ಥಳೀಯ ಸಮಿತಿ

ಚಿತ್ರ-ವರದಿ : ಈಶ್ವರ ಎಂ. ಐಲ್‌

Advertisement

Udayavani is now on Telegram. Click here to join our channel and stay updated with the latest news.

Next