Advertisement

ಶ್ರೀರಂಗಪಟ್ಟಣ: ಭೀಕರವಾಗಿ ಹತ್ಯೆಯಾದವರ ಸಾಮೂಹಿಕ ಶವ ಸಂಸ್ಕಾರ

04:57 PM Feb 07, 2022 | Team Udayavani |

ಶ್ರೀರಂಗಪಟ್ಟಣ: ಕೆ.ಆರ್.ಎಸ್.ನಲ್ಲಿ ಒಂದೇ ಕುಟುಂಬದ ಐವರ ಬರ್ಬರ ಹತ್ಯೆಯಾಗಿದ್ದವರ ಶವಗಳ‌ ಮರಣೋತ್ತರ ಪರೀಕ್ಷಯನ್ನು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ನಡೆಸಿ ಸೋಮವಾರ ಗ್ರಾಮದಲ್ಲಿ ಐವರ ಸಾಮೂಹಿಕ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

Advertisement

ಗ್ರಾಮದಲ್ಲಿ ಮೃತರಾದ ಐವರ ಪಾರ್ಥಿವ ಶರೀರಗಳ ಮೆರವಣಿಗೆಗೆ ಗ್ರಾಮಸ್ಥರ ಮಹಾಪೂರ ಹರಿದು ಬಂದಿತ್ತು. ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ  ಮಕ್ಕಳ ಸಾವಿಗೆ ಗ್ರಾಮಸ್ಥರು,ಸಂಬಂಧಿಕರು ಸೇರಿ ಊರಿಗೆ ಊರೇ ಕಂಬನಿ ಮಿಡಿದರು.

ಗುಜರಾತ್ ನ ಲಂಬಾಣಿ ತಾಂಡದ ಭೋರಿ ಸಂಪ್ರದಾಯದಂತೆ ನಡೆದ ಮೃತರ ಅಂತ್ಯ ಸಂಸ್ಕಾರ ವನ್ನು ಗ್ರಾಮಸ್ಥರ ನೆರವಿನಲ್ಲಿ‌ಮಾಡಲಾಯಿತು

ಅಂತ್ಯ ಸಂಸ್ಕಾರದ ವೇಳೆ ಸ್ಥಳದಲ್ಲಿ  ಕೆ.ಆರ್.ಎಸ್ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು

ನಿನ್ನೆ ಕೆ.ಆರ್.ಎಸ್ ಗ್ರಾಮದ ಬಜಾರ್ ಲೈನ್ ನಲ್ಲಿ ಒಂದೇ ಕುಟುಂಬ ಓರ್ವ  ಮಹಿಳೆ ಸೇರಿ ನಾಲ್ವರು ಮಕ್ಕಳ ಬರ್ಬರ ಹತ್ಯೆ ಯಾಗಿತ್ತು.

Advertisement

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next