Advertisement

ಸಮಸ್ಯೆ ಪರಿಹರಿಸಲು ಗ್ರಾಮಸ್ಥರ ಆಗ್ರಹ

04:02 PM Jul 14, 2019 | Naveen |

ಮಸ್ಕಿ: ತಾಲೂಕಿನ ಹಾಲಾಪುರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಕೂಡಲೇ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಮಾಜಿ ಸದಸ್ಯ ವೀರನಗೌಡ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಹಾಲಾಪುರ ಗ್ರಾಮದಲ್ಲೇ ಮೂರು ಶಾಲಾ ಬೋರ್‌ವೆಲ್ಗಳಿವೆ. ಈ ಪೈಕಿ ಒಂದನ್ನು ಮಾತ್ರ ದುರಸ್ತಿ ಮಾಡಿದ್ದು, ಇನ್ನೂ ಎರಡು ಕೆಟ್ಟಿವೆ. ಇವುಗಳನ್ನು ದುರಸ್ತಿ ಮಾಡುವಂತೆ ಪಿಡಿಒಗೆ ಮತ್ತು ಜಿಪಂ ಜೆಇಗೆ ದೂರವಾಣಿ ಮೂಲಕ ತಿಳಿಸಿದರೂ ಕ್ರಮ ವಹಿಸಿಲ್ಲ. ಹಾಲಾಪುರ ಗ್ರಾಮ ಮತ್ತು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರು ಸಂಗ್ರಹಿಸಿಕೊಳ್ಳಲು ಕೆರೆಗಳಿಲ್ಲ. ಕಾಲುವೆಗೆ ನೀರು ಬಂದ್‌ ಆದರೆ ಈ ಗ್ರಾಮಗಳ ಜನತೆ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಶಾಲಾ ಬೋರ್‌ ರಿಪೇರಿ ಮಾಡಿಸಿದರೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸ್ಪಂದಿಸುತ್ತಿಲ್ಲ: ಹಾಲಾಪುರ ಗ್ರಾಪಂ ವ್ಯಾಪ್ತಿಯ ಹಾಲಾಪುರ ಸೇರಿ ಇತರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಪಂ ಸದಸ್ಯರು ಪಿಡಿಒಗೆ ಸಂಪರ್ಕಿಸಿದರೆ ಸ್ಪಂದಿಸುತ್ತಿಲ್ಲ. ನೀವೇ ಏನಾದರೂ ಮಾಡಿ ನೀರು ಸರಬರಾಜು ಮಾಡುವಂತೆ ಪಿಡಿಒ ಹೇಳುತ್ತಾರೆ ಎಂದು ಗ್ರಾಪಂ ಸದಸ್ಯರು ದೂರಿದ್ದಾರೆ. ಎರಡು ತಿಂಗಳ ಹಿಂದೆ ಗ್ರಾಪಂಗೆ ನೇಮಕವಾಗಿರುವ ಪಿಡಿಒ ಈವರೆಗೆ ಒಂದೂ ಸಭೆ ನಡೆಸಿಲ್ಲ. ನೀರಿನ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದ್ದಾರೆ. ನೀರು ಸಮಸ್ಯೆ ನಿವಾರಣೆಗೆ ಗ್ರಾಮಸ್ಥರು ಫೋನ್‌ ಮಾಡಿದರೆ ನೀರಗಂಟಿಗೆೆ ಫೋನ್‌ ಮಾಡಿ ನೀರು ಬಿಡುತ್ತಾರೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಶಾಲಾ ಬೋರ್‌ವೆಲ್ ದುರಸ್ತಿಗೆ ಬೇಕಾಗಿರುವ ಸಾಮಗ್ರಿ ಕೊಡಿಸುವಂತೆ ಕೇಳಿದಾಗ ಮಸ್ಕಿಯಲ್ಲಿರುವ ಇಲೆಕ್ಟ್ರಿಕಲ್ ಅಂಗಡಿಗೆ ಹೋಗಿ ಸಾಮಾನು ತಂದು ರೀಪೇರಿ ಮಾಡಿ ಎಂದು ಹೇಳುತ್ತಿದ್ದಾರೆ. ಸಾಮಾನುಗಳನ್ನು ತರಲು ಹೋದರೆ ಪಿಡಿಒ ಹೇಳಿದರೆ ಮಾತ್ರ ಸಾಮಾನು ಕೊಡುತ್ತೇವೆಂದು ಅಂಗಡಿಯವರು ಹೇಳುತ್ತಾರೆ ಎಂದು ವಾಟರ್‌ಮ್ಯಾನ್‌ಗಳು ಹೇಳುತ್ತಿದ್ದಾÃ. ಕೂಡಲೇ ಮೇಲಧಿಕಾರಿಗಳು ನೀರಿನ ಸಮಸ್ಯೆ ಪರಿಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next