Advertisement

ನಿಷೇಧಾಜ್ಞೆ ಮೀರಿ ಹೋಮ ಮಾಡಿಸಿದ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್

02:01 PM Apr 24, 2020 | keerthan |

ರಾಯಚೂರು: ಕೋವಿಡ್-19 ವೈರಸ್ ಹರಡುವಿಕೆ ತಡೆಗಾಗಿ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್ ನಿಷೆಧಾಜ್ಞೆ ನಡುವೆಯೂ ಹೋಮ ನಡೆಸಿದರು. ಮಸ್ಕಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ತಮ್ಮ ಹತ್ತಾರು ಬೆಂಬಲಿಗರೊಂದಿಗೆ ಹೋಮ ನಡೆಸಿದರು.

Advertisement

ಎಲ್ಲೆಡೆ ಕೋವಿಡ್-19 ವೈರಸ್ ಹರಡುತ್ತಿದ್ದು, ಶೀಘ್ರದಲ್ಲೆ ಸಮಸ್ಯೆ ನಿವಾರಣೆ ಆಗಲಿ ಎಂದು ಪ್ರಾರ್ಥಿಸಿದರು.

ಕೋವಿಡ್-19 ಹರಡದಂತೆ ಸರ್ಕಾರ  ಎಲ್ಲ ದೇಗುಲಗಳ ಬಾಗಿಲು ಮುಚ್ಚಿಸಿದೆ. ಜನ ಗುಂಪುಗೂಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಇಲ್ಲಿ ಮಾತ್ರ ನಿಯಮ ಉಲ್ಲಂಫಿಸಿ ಹೋಮ ನೆರವೇರಿಸಲಾಯಿತು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಟೀಕೆಗೆ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next