Advertisement

ಮರಕ್ಕೆ ಮಾರುತಿ ವ್ಯಾನ್‌ ಡಿಕ್ಕಿ: ಓರ್ವ ಸಾವು

03:05 PM Dec 21, 2018 | Team Udayavani |

ಬೇಲೂರು: ಮಾರುತಿ ವ್ಯಾನ್‌ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಪೆಟ್ಟು ಬಿದ್ದಿರುವ ಘಟನೆ ತಾಲೂಕಿನ ತಗರೆ ಸಮೀಪ ಗುರುವಾರ ಸಂಭವಿಸಿದೆ. ಬಾಣಾವರದ ಗಣೇಶ್‌ ಪ್ರಸಾದ್‌ ಹೋಟೆಲ್‌ ಮಾಲೀಕ ರಾಜು(42) ಮೃತ ವ್ಯಕ್ತಿ. ಬಾಣಾವರದ ಗಣೇಶ್‌ ಪ್ರಸಾದ್‌ ಹೋಟೆಲ್‌ ಮಾಲೀಕ ರಾಜು ತಮ್ಮ ಸ್ನೇಹಿತರಾದ ಪೈಂಟರ್‌ ಸಿದ್ದೇಶ್‌, ದರ್ಶನ್‌, ಶೇಖರ್‌ ಅವರೊಂದಿಗೆ ಬುಧವಾರ ತನ್ನ ಸ್ನೇಹಿತನ ಆರೋಗ್ಯ ವಿಚಾರಿಸಲು ಮಾರುತಿ ವ್ಯಾನ್‌ ನಲ್ಲಿ ಮಂಗಳೂರಿಗೆ ತೆರಳಿ ವಾಪಸಾಗುತ್ತಿದ್ದಾಗ ಬೇಲೂರು ತಾಲೂಕು ಸಕಲೇಶಪುರ ರಸ್ತೆಯ ತಗರೆ ತಿರುವಿನ ಬಳಿ ಇದ್ದ ಮರಕ್ಕೆ ವ್ಯಾನ್‌ ಡಿಕ್ಕಿ ಹೊಡೆದಿದೆ.

Advertisement

ವ್ಯಾನಿನಲ್ಲಿದ್ದ ಸಿದ್ದೇಶ್‌ ಹಾಗೂ ದರ್ಶನ್‌ ಅವರ ಕಾಲು ಮುರಿದಿದೆ. ಶೇಖರ್‌ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳಕ್ಕೆ ಬೇಲೂರು ಸಿಪಿಐ ಲೋಕೇಶ್‌ ಪಿಎಸ್‌ಐ ಜಗದೀಶ್‌ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಸ್ಥಳೀಯರ ಆರೋಪ: ಬೇಲೂರು-ಬಿಕ್ಕೋಡು ರಸ್ತೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ಒಣಗಿದ ಮರಗಳಿವೆ. ಈ ಮರಗಳಿಗೆ ಡಿಕ್ಕಿ ಹೊಡೆದು 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಂಚಾರಕ್ಕೆ ತೊಂದರೆಯಾಗುತ್ತಿರುವ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದಾರೆಂದು ಸ್ಥಳೀಯರು ಆಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next