Advertisement

ಹಿತ್ತಲಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶ

12:58 PM Sep 13, 2020 | Suhan S |

ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಗಿಡ ಬೆಳೆದು ಅದನ್ನು ಮಾರಾಟ ಮಾಡಿ ಹಣ ಸಂಪಾದಿಸಬಹುದೆಂಬ ನಿರೀಕ್ಷೆಯಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ತಾಲೂಕಿನ ನಾಗಶೆಟ್ಟಹಳ್ಳಿ ತಾಂಡಾದಲ್ಲಿ ನಡೆದಿದೆ.

Advertisement

ಗ್ರಾಮದ ನಿವಾಸಿ ಸೋಮಲಾನಾಯಕ್‌ (50) ಬಂಧಿತ. ತನ್ನ ಮನೆ ಹಿತ್ತಲಲ್ಲಿ ಗಾಂಜಾ ಗಿಡ ಬೆಳೆದಿದ್ದನು. ಗಾಂಜಾ ಬೆಳೆಯಬಾರದು ಎಂದು ಗೊತ್ತಿದ್ದರೂ ಸೋಮಲಾನಾಯ್ಕ ತನ್ನ ಮನೆ ಹಿತ್ತಲಲ್ಲಿ ಬೆಳೆಸಿದ್ದನು. ಇನ್ನು ಕೆಲವೇ ಸಮಯದಲ್ಲಿ ಇವು ಕೊಯ್ಲಿಗೆ ಬರುತ್ತಿದ್ದವು. ಸೋಮಲಾನಾಯಕ್‌ ಗಾಂಜಾಗಿಡಗಳನ್ನು ಬೆಳೆದ ವಿಚಾರ ಗ್ರಾಮಸ್ಥರಿಗೆ ತಿಳಿಯದಂತೆ ಮುಚ್ಚಿಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಟಿ.ರಂಗಪ್ಪ, ಸಬ್‌ ಇನ್ಸ್ ಪೆಕ್ಟರ್‌ ಸೋಮಶೇಖರ್‌ ಅವರ ನೇತೃತ್ವದ ಸಿಬ್ಬಂದಿಗಳಾದ ಅರ್ಜುನ ಲಮಾಣಿ, ಉದಯರಾಜು, ಕುಮಾರ, ಸುನೀಲ್‌ ಭಾಸಣಿ ತಂಡ ದಾಳಿ ಕಾರ್ಯಾಚರಣೆ ನಡೆಸಿತು.

ಹಿತ್ತಲಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದ್ದು, ಸುಮಾರು 2ಕೆ.ಜಿ. ಗಾಂಜಾ ಸೊಪ್ಪು ವಶಪಡಿಸಿಕೊಂಡಿರುವ ಹೊಸಹಳ್ಳಿ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next