Advertisement

Kannada Cinema; ಸರಳವಾಗಿ ಸೆಟ್ಟೇರಿದ ‘ಮಾರ್ಗದರ್ಶಿ’

05:06 PM Feb 02, 2024 | Team Udayavani |

1960ರ ದಶಕದಲ್ಲಿ ವರನಟ ಡಾ. ರಾಜಕುಮಾರ್‌ ಅಭಿನಯದ “ಮಾರ್ಗದರ್ಶಿ’ ಎಂಬ ಸಿನಿಮಾ ತೆರೆಗೆ ಬಂದಿದ್ದು ಬಹುತೇಕರಿಗೆ ನೆನಪಿರಬಹುದು. ಈಗ ಅದೇ “ಮಾರ್ಗದರ್ಶಿ’ ಎಂಬ ಹೆಸರಿನಲ್ಲಿ ಮತ್ತೂಂದು ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ.

Advertisement

ಅಂದಹಾಗೆ, ಈ ಸಿನಿಮಾದ ಹೆಸರು “ಮಾರ್ಗದರ್ಶಿ’ ಅಂತಿದ್ದರೂ, ಈ ಸಿನಿಮಾಕ್ಕೂ ಅಣ್ಣಾವ್ರ ಅಭಿನಯದ “ಮಾರ್ಗದರ್ಶಿ’ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ತಮ್ಮ ಸಿನಿಮಾದ ಕಥಾಹಂದರಕ್ಕೆ ಸೂಕ್ತ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಸಿನಿಮಾಕ್ಕೆ “ಮಾರ್ಗದರ್ಶಿ’ ಅಂಥ ಹೆಸರಿಟ್ಟುಕೊಂಡಿದೆ.

ಇತ್ತೀಚೆಗೆ “ಮಾರ್ಗದರ್ಶಿ’ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದ್ದು, ಶಾಸಕ ಪ್ರಿಯಾಕೃಷ್ಣ ಸಿನಿಮಾಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. “ಚೈತನ್ಯ ಸಿನಿಮಾಸ್‌’ ಬ್ಯಾನರ್‌ನಲ್ಲಿ ಬಸವರಾಜು ನಿರ್ಮಾಣ ಮಾಡುತ್ತಿರುವ ಕ್ರೈಂ-ಥ್ರಿಲ್ಲರ್‌ ಕಥಾಹಂದರದ “ಮಾರ್ಗದರ್ಶಿ’ ಸಿನಿಮಾಕ್ಕೆ ನಾಗೇಶ್‌ ಉಜ್ಜನಿ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ನವ ಪ್ರತಿಭೆ ಸಾಗರ್‌ ನಾಯಕನಾಗಿ ಹಾಗೂ ಗಹನಾ ನಾಯಕಿಯಾಗಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್‌, ಮಳವಳ್ಳಿ ಸಾಯಿಕೃಷ್ಣ, ಜಗದೀಶ್‌ ಕೊಪ್ಪ, ಶಿವಕುಮಾರ್‌ ಆರಾಧ್ಯ, ಜೋಗಿ ನಾಗರಾಜ್‌, ನಂಜಪ್ಪ ಆಚಾರ್‌, ಸೂರ್ಯ ಕುಂದಾಪುರ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next