Advertisement

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

12:15 AM Jul 07, 2024 | Team Udayavani |

ಕುಂದಾಪುರ: ಮಳೆಯಬ್ಬರ ಜೋರಾಗಿದ್ದು, ಕಡಲ ಅಲೆಗಳ ಬಿರುಸು ಜಾಸ್ತಿಯಾಗಿದೆ. ಇದರಿಂದ ಮರವಂತೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.

Advertisement

ಮರವಂತೆ ಹೊರ ಬಂದರನ್ನು ಸಂಪರ್ಕಿಸುವ ರಸ್ತೆಯ ಬೊಬ್ಬರ್ಯ ದೇವಸ್ಥಾನ ಸಮೀಪ ನಿರ್ಮಿಸಲಾಗಿರುವ ತಡೆಗೋಡೆಗೆ ಕಡಲಿನ ಭಾರೀ ಎತ್ತರದ ಅಲೆಗಳು ಒಂದರ ಹಿಂದೊಂದು ಅಪ್ಪಳಿಸುತ್ತಿದ್ದು, ತಡೆಗೋಡೆಯ ಕಲ್ಲುಗಳು ಕುಸಿದು ಕಡಲು ಸೇರುತ್ತಿದೆ.

ತಡೆಗೋಡೆ ಕುಸಿಯುತ್ತಿರುವುದರಿಂದ ತಡೆಗೋಡೆಗೆ ತಾಗಿಕೊಂಡಿರುವ ಸಂಪರ್ಕ ರಸ್ತೆ ಅಪಾಯದಂಚಿನಲ್ಲಿದೆ. ಕಡಲಿನ ರಕ್ಕಸ ಅಲೆಗಳು ತಡೆಗೋಡೆಯನ್ನು ದಾಟಿ ತೀರ ಪ್ರದೇಶದತ್ತ ಮುನ್ನುಗುತ್ತಿದೆ. ಮೂರು ವರ್ಷಗಳ ಹಿಂದೆ ತೌಖೆ ಚಂಡಮಾರುತದ ವೇಳೆ ಕಡಲ ಅಲೆಗಳ ಆರ್ಭಟಕ್ಕೆ ಈ ಸಂಪರ್ಕ ರಸ್ತೆ ಕೊಚ್ಚಿ ಹೋಗಿ ಸಮುದ್ರ ತೀರದಲ್ಲಿರುವ ಮನೆಗಳು ಕೊಚ್ಚಿ ಹೋಗುವ ಆತಂಕ ಎದುರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next