Advertisement

“ಮರಾಠಾ ಮೀಸಲು ಕ್ರಮ ಸಾಂವಿಧಾನಿಕ’

01:24 AM Jun 28, 2019 | Team Udayavani |

ಮುಂಬಯಿ: ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ಮಹಾರಾಷ್ಟ್ರ ಸರಕಾರದ ಮೀಸಲು ನೀತಿಗೆ ಬಾಂಬೆ ಹೈಕೋರ್ಟ್‌ ಗುರುವಾರ ಸಮ್ಮತಿ ನೀಡಿದೆ. ಶೇ.16ರ ಬದಲಾಗಿ ಶೇ. 12-13ರ ವ್ಯಾಪ್ತಿಯಲ್ಲಿ ಮೀಸಲು ನೀಡಬಹುದು ಎಂದು ಅದು ಸಲಹೆ ಮಾಡಿದೆ.

Advertisement

ಹೀಗಾಗಿ, ಮಹಾರಾಷ್ಟ್ರದಲ್ಲಿ ಅತ್ಯಂತ ಕೋಲಾಹಲ ಮತ್ತು ವಿವಾದ ಸೃಷ್ಟಿಸಿದ್ದ ಬೆಳವಣಿಗೆ ಒಂದು ರೀತಿಯಲ್ಲಿ ಇತ್ಯರ್ಥವಾಗಲಿದೆ. ಈ ವರ್ಷದ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಕೂಡ ಈ ತೀರ್ಪು ಬಿಜೆಪಿ – ಶಿವಸೇನೆ ಮೈತ್ರಿಕೂಟದ ಪರವಾಗಿಯೇ ಜನರು ಮತ ಹಾಕಲಿದ್ದಾರೆ ಎಂಬ ಲೆಕ್ಕಾಚಾರವೂ ನಡೆದಿದೆ.

“ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ನೀಡುವುದು ಸಾಂವಿಧಾನಕವಾಗಿದೆ. ಆದರೆ ಶೇ. 16ರ ಬದಲಾಗಿ ಶೇ. 12-13ರ ವ್ಯಾಪ್ತಿಯಲ್ಲಿ ಮೀಸಲು ಪ್ರಮಾಣ ಇರಲಿ’ ಹೈಕೋರ್ಟ್‌ನ ವಿಭಾಗೀಯ ಪೀಠ ಹೇಳಿದೆ. ಅದಕ್ಕೆ ಉತ್ತರಿಸಿದ ಮಹಾರಾಷ್ಟ್ರ ಸರಕಾರದ ಪರ ವಕೀಲರು ಶೇ. 16ರ ಮೀಸಲು ಪ್ರಮಾಣದಲ್ಲಿಯೇ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next