Advertisement

Marankatte ಶ್ರೀ ಬ್ರಹ್ಮಲಿಂಗೇಶ್ವರ ದೇಗುಲ ; ಜ. 15 ರಂದು ಮಕರ ಸಂಕ್ರಮಣ ಉತ್ಸವ

11:39 PM Jan 12, 2024 | Team Udayavani |

ಕುಂದಾಪುರ: ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಜ. 15ರಂದು ವರ್ಷಾವಧಿಯ ಮಕರ ಸಂಕ್ರಮಣ ಉತ್ಸವ ನಡೆಯಲಿದೆ.

Advertisement

ಜ. 15ರಂದು ಬೆಳಗ್ಗೆ 9ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ 10.30ಕ್ಕೆ ಗೆಂಡ ಸೇವೆ, ಜ. 16ರಂದು ಬೆಳಗ್ಗೆ 9.30ಕ್ಕೆ ಮಹಾ ಮಂಗಳಾರತಿ, ಅನಂತರ ಮಂಡಲ ಸೇವೆ, ಜ. 17ರಂದು ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಮಂಡಲ ಸೇವೆ, ರಾತ್ರಿ 8ಕ್ಕೆ ಕಡುಬು ನೈವೇದ್ಯ, ಮಹಾಮಂಗಳಾರತಿ, ರಾತ್ರಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಮೇಳದಿಂದ ಯಕ್ಷಗಾನ ಸೇವೆ ಆಟ ನಡೆಯಲಿದೆ.

“ಪ್ಲಾಸ್ಟಿಕ್‌ ಮುಕ್ತ ಮಾರಣಕಟ್ಟೆ ಜಾತ್ರೆ’ ಪ್ರಯುಕ್ತ ಏಕ ಬಳಕೆಯ ಪ್ಲಾಸ್ಟಿಕನ್ನು ನಿಷೇಧಿಸಲಾಗಿದೆ. ಗೆಂಡ ಸೇವೆ, ಮಂಡಲ ಸೇವೆ ಹಾಗೂ ಮಹಾಪೂಜೆ ನಡೆಯುವ ವೇಳೆ ಭಕ್ತರ ಪೂಜೆ, ಹಣ್ಣುಕಾಯಿ ಸೇವೆ ಜರಗುವುದಿಲ್ಲ ಎಂದು ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next