Advertisement

ಮಾರಣಕಟ್ಟೆ ದೇಗುಲ: ಜೂ.15ರ ಸಂಕ್ರಮಣದಿಂದ ಭಕ್ತರ ಪ್ರವೇಶಕ್ಕೆ ಅನುವು

11:55 AM Jun 07, 2020 | sudhir |

ಮಾರಣಕಟ್ಟೆ : ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಕೋವಿಡ್‌ 19ರ ಬಾಧೆಯಿಂದ ಕಳೆದ ಎರಡು ತಿಂಗಳಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು ಆದುದರಿಂದ  ಚಿತ್ತೂರು ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಭಕ್ತರಿಗೆ ದೇವರ ದರ್ಶನ ಕ್ಕೆ ಜೂನ್ ತಿಂಗಳ 15ರಸಂಕ್ರಮಣದಿಂದ ಅನುವ ಮಾಡಿ ಕೊಡಲಾಗುವುದು ಎಂದು ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ತಿಳಿಸಿದ್ದಾರೆ.

Advertisement

ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ಶ್ರೀಕ್ಷೇತ್ರ ದರ್ಶನಕ್ಕೆ ಅವಕಾಶವಿದ್ದು ಹರಕೆಯ ಪೂಜಾ ವಿಧಿಗಳು ಹಾಗೂ ಅನ್ನ ಪ್ರಸಾದ ವ್ಯವಸ್ಥೆಯನ್ನು ಮುಂದಿನ ಆದೇಶದವರೆಗೆ ಮೊಟಕುಗೊಳಿಸಲಾಗಿದೆ. ಭಕ್ತರು ಶ್ರೀ ದೇವರಿಗೆ ಸಲ್ಲಿಸುವ ಕಾಣಿಕೆಯನ್ನು ಸ್ವೀಕರಿಸಲಾಗುವುದು ಎಂದು ಮೊಕ್ತೇಸರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next