Advertisement

ನೈಟ್ ರೌಂಡ್ ಜೀವನದ ಕೊನೆಯ ರೌಂಡ್ ಆಯ್ತು! ಮರಕ್ಕೆ ಜೀಪ್ ಢಿಕ್ಕಿಯಾಗಿ ಇಬ್ಬರು ಪೊಲೀಸರ ಸಾವು

08:26 AM Nov 12, 2020 | keerthan |

ಮೈಸೂರು: ರಾತ್ರಿ ವೇಳೆ ಗಸ್ತು ಕರ್ತವ್ಯಕ್ಕೆ ತೆರಳಿದ್ದ ಪೊಲೀಸರಿದ್ದ ಜೀಪು ಮರಕ್ಕೆ ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಕೆಆರ್ ನಗರ ತಾಲ್ಲೂಕಿನಲ್ಲಿ ಕಳೆದ ರಾತ್ರಿ ನಡೆದಿದೆ.

Advertisement

ಕೆಆರ್ ನಗರ ಪೊಲೀಸ್ ಠಾಣೆಯ ಎಎಸ್ ಐ ಮೂರ್ತಿ ಮತ್ತು ಎಸ್ ಬಿ(ಗುಪ್ತ ವಾರ್ತೆ) ಕರ್ತವ್ಯ ನಿರ್ವಹಿಸುತ್ತಿದ್ದ ಶಾಂತಕುಮಾರ್ ಮೃತಪಟ್ಟ ಪೊಲೀಸರು.

ಬುಧವಾರ ರಾತ್ರಿ ಇವರಿಬ್ಬರು ಜೀಪ್ ನಲ್ಲಿ ಸರ್ಕಲ್ ನೈಟ್ ರೌಂಡ್ ಕರ್ತವ್ಯದ ನಿರ್ವಹಿಸಿಕೊಂಡು ಸಾಲಿಗ್ರಾಮ ಪೊಲೀಸ್ ಠಾಣೆಯ ಕಡೆಯಿಂದ ಕೆ.ಆರ್ ನಗರದ ಕಡೆಗೆ ಬರುತ್ತಿದ್ದರು. ಬೆಳ್ಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಸಿದ್ದನ ಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಎಸ್ ಐ ಮೂರ್ತಿ ಮತ್ತು ಶಾಂತಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಸಂಪುಟ ಕಸರತ್ತು ಬಿರುಸು; ಸಿಎಂ ನಿವಾಸಕ್ಕೆ ದೌಡಾಯಿಸಿದ ಆಕಾಂಕ್ಷಿಗಳು

Advertisement

ಇಬ್ಬರ ಶವಗಳು ಕೆಆರ್ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿಡಲಾಗಿದ್ದು, ಶವಗಾರ ಮತ್ತು ಘಟನಾ ಸ್ಥಳಕ್ಕೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ದಕ್ಷಿಣ ಡಿವೈಎಸ್ ಪಿ ಸುಮಿತ್ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next